ADVERTISEMENT

ಹಾಕಿ: ಹರೀಶ್‌ ‘ಹ್ಯಾಟ್ರಿಕ್‌’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 20:01 IST
Last Updated 20 ಫೆಬ್ರುವರಿ 2019, 20:01 IST

ಬೆಂಗಳೂರು: ಹರೀಶ್‌ ಮುಟಗರ್‌ ಅವರ ‘ಹ್ಯಾಟ್ರಿಕ್‌’ ಗೋಲುಗಳ ಬಲದಿಂದ ಸಾಯ್‌ ತಂಡ ಹಾಕಿ ಕರ್ನಾಟಕ ಆಶ್ರಯದ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಶಾಂತಿನಗರದಲ್ಲಿರುವ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ಬುಧವಾರ ನಡೆದ ಹಣಾಹಣಿಯಲ್ಲಿ ಸಾಯ್‌ 8–0 ಗೋಲುಗಳಿಂದ ಕಸ್ಟಮ್ಸ್‌ ಆ್ಯಂಡ್‌ ಎಕ್ಸೈಸ್‌ ತಂಡವನ್ನು ಮಣಿಸಿತು.

ಹರೀಶ್‌ 7, 9 ಮತ್ತು 11ನೇ ನಿಮಿಷಗಳಲ್ಲಿ ಗೋಲು ಹೊಡೆದು ಸಂಭ್ರಮಿಸಿದರು. ಆಭರಣ್ ಸುದೇವ್‌ (16 ಮತ್ತು 19ನೇ ನಿಮಿಷ) ಎರಡು ಗೋಲು ದಾಖಲಿಸಿ ತಂಡದ ಗೆಲುವನ್ನು ಖಾತ್ರಿಪಡಿಸಿದರು. ಎಂ.ರಾಜೇಂದ್ರ (37), ಪೂವಣ್ಣ (57) ಮತ್ತು ಬಿ.ಎಂ.ಲಿಖಿತ್ (59) ಅವರೂ ಕೈಚಳಕ ತೋರಿದರು.

ADVERTISEMENT

ಡಿವೈಇಎಸ್‌ ಮತ್ತು ಕೆನರಾ ಬ್ಯಾಂಕ್‌ ನಡುವಣ ದಿನದ ಇನ್ನೊಂದು ಪಂದ್ಯ 2–2 ಗೋಲುಗಳಿಂದ ಸಮಬಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.