ADVERTISEMENT

ಮಲ್ಲಕಂಬ: ರಾಜ್ಯ ತಂಡ ಪ್ರಕಟ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 18:42 IST
Last Updated 22 ಸೆಪ್ಟೆಂಬರ್ 2021, 18:42 IST
ಲಕ್ಷ್ಮೇಶ್ವದ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮಲ್ಲಕಂಬದ ರಾಜ್ಯ ತಂಡದ ಆಯ್ಕೆ ಸಂದರ್ಭದಲ್ಲಿ ಮಲ್ಲಕಂಬ ಪಟು ಪ್ರದರ್ಶನ ನೀಡಿದ ಕ್ಷಣ
ಲಕ್ಷ್ಮೇಶ್ವದ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮಲ್ಲಕಂಬದ ರಾಜ್ಯ ತಂಡದ ಆಯ್ಕೆ ಸಂದರ್ಭದಲ್ಲಿ ಮಲ್ಲಕಂಬ ಪಟು ಪ್ರದರ್ಶನ ನೀಡಿದ ಕ್ಷಣ   

ಲಕ್ಷ್ಮೇಶ್ವರ (ಗದಗ ಜಿಲ್ಲೆ): ಮಧ್ಯಪ್ರದೇಶದ ಉಜ್ಜಯನಿಯಲ್ಲಿಸೆ.26ರಿಂದ 30ರವರೆಗೆ ನಡೆಯಲಿರುವ 36ನೇ ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್‍ಷಿಪ್‍ಗೆ ರಾಜ್ಯ ತಂಡದ ಆಯ್ಕೆ ಇಲ್ಲಿನ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು.

12, 14, 18 ಮತ್ತು 18 ವರ್ಷ ಮೇಲ್ಪಟ್ಟ ಬಾಲಕ ಮತ್ತು 12, 14, 16 ಮತ್ತು 16 ಮೇಲ್ಪಟ್ಟ ಬಾಲಕಿಯರ ಒಂದೊಂದು ವಿಭಾಗದಿಂದ 12 ಸ್ಪರ್ಧಾಳುಗಳಂತೆ ಒಟ್ಟು 48 ಸ್ಪರ್ಧಾಳುಗಳು ಆಯ್ಕೆ ಆಗಿದ್ದಾರೆ ಎಂದು ಕರ್ನಾಟಕ ಮಲ್ಲಕಂಬ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಲಕ್ಷ್ಮೇಶ್ವರದ ಪ್ರೊ.ಎಸ್.ಎಫ್.ಕೊಡ್ಲಿ ತಿಳಿಸಿದರು.

12 ವರ್ಷದ ಒಳಗಿನ ಬಾಲಕರು:‌ ಆಕಾಶ ಬಗರನಾಳ- ಮೂಡಬಿದಿರೆ, ಕಾರ್ತಿಕ ವಾಲಿಕಾರ-ತುಳಸಿಗೆರೆ, ಪವನ ಹಡಪದ-ತುಳಸಿಗೆರೆ, ಬಸವರಾಜ ಹುರಕಡಿ-ಮೂಡಬಿದಿರೆ, ಸಮರ್ಥ ಹಡಪದ-ತುಳಸಿಗೆರೆ, ವಿನಾಯಕ ನಾಯಕ-ಮೂಡಬಿದಿರೆ.

ADVERTISEMENT

12 ವರ್ಷದ ಒಳಗಿನ ಬಾಲಕಿಯರು: ರತ್ನಾ ಶಾಗೋಟಿ- ಶಿರಗುಪ್ಪಿ, ರಕ್ಷಿತಾ ಮಾಂಗಿ- ಮೂಡಬಿದಿರೆ, ಶಾರದಾ ದೀವಟಗಿ-ತುಳಸಿಗೆರೆ, ಸವಿತಾ ಕರಿಯಣ್ಣವರ- ಹುಬ್ಬಳ್ಳಿ, ಯಮುನಾ ಹೋಳಿ- ಅವರಾಧಿ, ಕಾವೇರಿ ಅಮಟಿ-ಮೂಡಬಿದಿರೆ.

14 ವರ್ಷ ಒಳಗಿನ ಬಾಲಕರು: ಸಂಗಮೇಶ ಹಳವರ-ಮೂಡಬಿದಿರೆ, ದೀಪಕ ಚಿಕ್ಕಣ್ಣವರ-ಮೂಡಬಿದಿರೆ, ಆದಿತ್ಯ ಗಲಟಗಿ-ಮೂಡಬಿದಿರೆ, ಸಂಗಪ್ಪ ತೆಗ್ಗಿ-ಮೂಡಬಿದಿರೆ, ಕಾಶಿನಾಥ ಹಡಪದ-ಕಲಾದಗಿ, ಮುಬಾರಕ್ ಮುಲ್ಲಾನವರ-ನೀಲಗುಂದ.

14 ವರ್ಷ ಒಳಗಿನ ಬಾಲಕಿಯರು: ಮದು ಹೊಸರಿತ್ತಿ- ಮೂಡಬಿದಿರೆ, ಮುತ್ತವ್ವ ದಾಸರ- ತುಳಸಿಗೆರೆ, ದೊಡ್ಡಮ್ಮ ಪಾಟೀಲ-ಮೂಡಬಿದಿರೆ, ರಾಧಾ ಅಳವಂಡಿ-ಶಿರಗುಪ್ಪಿ, ದಾನೇಶ್ವರಿ ಕಳಶೆಟ್ಟಿ-ಅವರಾಧಿ, ಭೂಮಿಕಾ ದಾಸರ-ತುಳಸಿಗೆರೆ.

16 ವರ್ಷ ಒಳಗಿನ ಬಾಲಕಿಯರು: ಅನು ಹಡಪದ- ತುಳಸಿಗೆರೆ, ಲಕ್ಷ್ಮೀ ಹೊನ್ನಪ್ಪನವರ- ತುಳಸಿಗೆರೆ, ಅನನ್ಯ ಹಿರೇಮಠ-ಹರ್ಲಾಪುರ, ಸುಪ್ರಿತಾ- ಮೂಡಬಿದಿರೆ, ಸ್ವಾತಿ ಬಿದರಿ- ಕಲಾದಗಿ, ಸಂಜನಾ ಗಟ್ನಟ್ಟಿ-ಕಲಾದಗಿ.

16 ವರ್ಷ ಮೇಲಿನ ಬಾಲಕಿಯರು: ಅನುಪಮಾ ಕೆರಕಲಮಟ್ಟಿ- ಬಾಗಲಕೋಟೆ, ಮಂಜುಳಾ ಹುಲಗ ಣ್ಣವರ- ತುಳಸಿಗೆರೆ, ಸಂಗೀತಾ ಹುಲಗೇರಿ- ಕಲಾದಗಿ, ಇಂದಿರಾ ಸೊನ್ನದ- ತುಳಸಿಗೆರೆ, ಹನಮವ್ವ ಲಾಯನ್ನವರ- ತುಳಸಿಗೆರೆ, ರುದ್ರಮ್ಮ ಚೌಕಿಮಠ- ಕಲಾದಗಿ.

18 ವರ್ಷ ಒಳಗಿನ ಬಾಲಕರು: ಸಂಗಮೇಶ-ಮೂಡಬಿದಿರೆ, ಕೃಷ್ಣ ಲದ್ದಿ- ತುಳಸಿಗೆರೆ, ಆದಿತ್ಯ ಕೆಲಕಲಮಟ್ಟಿ- ಕಲಾದಗಿ, ರಾಮನಗೌಡ- ಮೂಡಬಿದಿರೆ, ಪ್ರಭು ಬೇವಿನಕಟ್ಟಿ- ಅವರಾಧಿ, ಬಸವರಾಜ ಹೋಳಿ-ಅವರಾಧಿ.

18 ವರ್ಷ ಮೇಲಿನ ಬಾಲಕರು: ವೀರಭದ್ರ- ಮೂಡಬಿದಿರೆ, ಶ್ರೀಧರ-ಮೂಡಬಿದಿರೆ, ಕೆ.ಶಂಕ್ರಪ್ಪ- ಮೂಡಬಿದಿರೆ, ವಿಜಯ ಶಿರಬೂರ- ತುಳಸಿಗೆರೆ, ಶಿವಾನಂದ ಲಾಯನ್ನವರ- ತುಳಸಿಗೆರೆ, ಹನಮಂತ ಮಡಿವಾಳರ- ಮೂಡಬಿದರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.