
ವಿಜಯವಾಡ: ಸ್ಥಳೀಯ ನೆಚ್ಚಿನ ಆಟಗಾರ್ತಿ ಸೂರ್ಯ ಚರಿಷ್ಮಾ ಮತ್ತು ಅನುಭವಿ ಶ್ರುತಿ ಮುಂಡಾಡ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಮಹಿಳಾ ಸಿಂಗಲ್ಸ್ನಲ್ಲಿ ಅಗ್ರ ಶ್ರೇಯಾಂಕಿತರಿಗೆ ಆಘಾತ ನೀಡಿ ಸೆಮಿಫೈನಲ್ ಪ್ರವೇಶಿಸಿದರು.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಚರಿಷ್ಮಾ 21-12, 21-15ರಿಂದ ಅಗ್ರ ಶ್ರೇಯಾಂಕದ ಉನ್ನತಿ ಹೂಡಾ ಅವರನ್ನು ಹಿಮ್ಮೆಟ್ಟಿಸಿದರು. ಶ್ರುತಿ 22-20, 21-12ರಿಂದ ಎರಡನೇ ಶ್ರೇಯಾಂಕದ ಅನುಪಮಾ ಉಪಾಧ್ಯಾಯ ಅವರನ್ನು ಸೋಲಿಸಿದರು.
18 ವರ್ಷದ ಚರಿಷ್ಮಾ ಅವರು ಸೆಮಿಫೈನಲ್ನಲ್ಲಿ ರಕ್ಷಿತಾಶ್ರೀ ಅವರನ್ನು ಎದುರಿಸಲಿದ್ದಾರೆ. ರಕ್ಷಿತಾ 16-21, 21-14, 21-18ರಿಂದ ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನ ಬೆಳ್ಳಿ ವಿಜೇತೆ ತನ್ವಿ ಶರ್ಮಾ ಅವರಿಗೆ ಆಘಾತ ನೀಡಿದರು.
ಪುರುಷರ ಸಿಂಗಲ್ಸ್ನಲ್ಲಿ ಅಗ್ರ ಶ್ರೇಯಾಂಕದ ಕಿರಣ್ ಜಾರ್ಜ್ 21-18, 21-18ರಿಂದ 11ನೇ ಶ್ರೇಯಾಂಕದ ರೋನಕ್ ಚೌಹಾಣ್ ಅವರ ಸವಾಲನ್ನು ಗೆದ್ದರು. ಅವರು ನಾಲ್ಕರ ಘಟ್ಟದ ಹಣಾಹಣಿಯಲ್ಲಿ 2024ರ ಒಡಿಶಾ ಓಪನ್ ಚಾಂಪಿಯನ್ ರಿತ್ವಿಕ್ ಸಂಜೀವಿ ಎಸ್. ಅವರನ್ನು ಎದುರಿಸಲಿದ್ದಾರೆ. ರಿತ್ವಿಕ್ ಮತ್ತೊಂದು ಪಂದ್ಯದಲ್ಲಿ 21-13, 22-20ರಿಂದ ಕೆ. ಸತೀಶ್ ಕುಮಾರ್ ಅವರನ್ನು ಸೋಲಿಸಿದರು.
ಎರಡನೇ ಶ್ರೇಯಾಂಕದ ತರುಣ್ ಮನ್ನೆಪಳ್ಳಿ 21-13, 22-20ರಿಂದ ಮನರಾಜ್ ಸಿಂಗ್ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ಅವರು ಮುಂದಿನ ಸುತ್ತಿನಲ್ಲಿ ಭರತ್ ರಾಘವ್ ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.