ಬೆಂಗಳೂರು: ಪಿಎಸ್ಟಿಟಿಎ ಕ್ಲಬ್ನ ರೋಹಿತ್ ಶಂಕರ್ ಮತ್ತು ಎಸ್ಕೆಐಇಎಸ್ನ ತೃಪ್ತಿ ಪುರೋಹಿತ್ ಅವರು ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಆಯೋಜಿಸಿದ್ದ ರಾಜ್ಯ ರ್ಯಾಂಕಿಂಗ್ ಟೂರ್ನಿಯಲ್ಲಿ ಕ್ರಮವಾಗಿ ಸಬ್ಜೂನಿಯರ್ ಬಾಲಕರ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಮಲ್ಲೇಶ್ವರಂ ಅಸೋಸಿಯೇಷನ್ ಆವರಣದಲ್ಲಿ ನಡೆದ ಟೂರ್ನಿಯ ಬಾಲಕರ ವಿಭಾಗದ ಫೈನಲ್ನಲ್ಲಿ ರೋಹಿತ್ ಶಂಕರ್ ಜಿಇಎಂ ಕ್ಲಬ್ನ ಹೃಷಿಕೇಶ್ ಶೆಟ್ಲೂರ್ ವಿರುದ್ಧ 11–8, 11–7, 11–4ರಲ್ಲಿ ಗೆಲುವು ಸಾಧಿಸಿದರು.
ಸೆಮಿಫೈನಲ್ನಲ್ಲಿ ಹೃಷಿಕೇಷ್, ಎಸ್ಬಿಟಿಟಿಎ ಕ್ಲಬ್ನ ಅಭಿನವ್ ವಿರುದ್ಧ 11-6, 6-11, 11-8, 14-12ರಲ್ಲಿ ಜಯ ಗಳಿಸಿದರೆ, ರೋಹಿತ್ 11-7, 11-6, 11-3ರಲ್ಲಿ ಪಿಎಸ್ಟಿಟಿಎಯ ಪ್ರಧಾನ್ ವಿರುದ್ಧ ಗೆಲುವು ಸಾಧಿಸಿದರು.
ಬಾಲಕಿಯರ ವಿಭಾಗದ ಫೈನಲ್ನಲ್ಲಿ ತೃಪ್ತಿ ಪುರೋಹಿತ್ ಬಿಎನ್ಎಂ ಕ್ಲಬ್ನ ದೇಶ್ನಾ ವಂಶಿಕಾ ವಿರುದ್ಧ14-12, 12-10, 12-10ರಲ್ಲಿ ಜಯ ಗಳಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ತೃಪ್ತಿ 5-11, 11-5, 11-2, 12-10ರಲ್ಲಿ ಎಂಎಸ್ಎಸ್ನ ನಿಹಾರಿಕಾ ವಿರುದ್ಧ, ದೇಶ್ನಾ 11-5, 7-11, 11-9, 11-6ರಲ್ಲಿ ಡಬ್ಲ್ಯುಸಿಟಿಟಿಸಿಯ ಸಹನಾ ಮೂರ್ತಿಯ ವಿರುದ್ಧ ಗೆಲುವು ಸಾಧಿಸಿದರು.
ಶೇಷಾಂತ, ಸಾನ್ವಿ ಚಾಂಪಿಯನ್
ಕೆಡೆಟ್ ಬಾಲಕರ ವಿಭಾಗದ ಫೈನಲ್ನಲ್ಲಿ ಡಬ್ಲ್ಯುಸಿಟಿಟಿಸಿಯ ಶೇಷಾಂತ್ 9-11, 11-4, 11-9, 9-11, 12-10ರಲ್ಲಿ ಸಿಎಂ ಕ್ಲಬ್ನ ತೇಶುಬ್ ದಿನೇಶ್ ವಿರುದ್ಧ ಜಯ ಗಳಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಶೇಷಾಂತ್5-11, 11-8, 11-7, 11-8ರಲ್ಲಿ ಎಸ್ಬಿಟಿಟಿಎಯ ಅರ್ಣವ್ ಎನ್ ವಿರುದ್ಧ, ತೇಶುಬ್11-7, 8-11, 11-7, 11-13, 11-3ರಲ್ಲಿ ಸಿಎಂ ಕ್ಲಬ್ನ ಮೊಹನಿಶ್ ನಂದಿ ವಿರುದ್ಧ ಜಯ ಗಳಿಸಿದರು.
ಕೆಡೆಟ್ ಬಾಲಕಿಯರ ವಿಭಾಗದ ಫೈನಲ್ನಲ್ಲಿ ಸಾನ್ವಿ 11-5, 11-5, 7-11, 11-7ರಲ್ಲಿ ಬಿಎನ್ಎಂನ ವೃಷಾಲಿ ಕಿಣಿ ವಿರುದ್ಧ ಗೆಲುವು ಸಾಧಿಸಿದರು. ಸೆಮಿಫೈನಲ್ನಲ್ಲಿ ಸಾನ್ವಿ11-5, 11-6, 11-5ರಲ್ಲಿ ಎಸ್ಕೆಐಇಎಸ್ನ ಹಿಮಾಂಶಿ ಚೌಧರಿ ವಿರುದ್ಧ, ವೃಷಾಲಿ ಕಿಣಿ9-11, 6-11, 11-7,11-7, 11-5ರಲ್ಲಿ ಬಿಟಿಟಿಎಯ ಆಯುಷಿ ಗೋಡ್ಸೆ ವಿರುದ್ಧ ಗೆಲುವು ಸಾಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.