ADVERTISEMENT

ಟೇಬಲ್‌ ಟೆನಿಸ್‌ ಟೂರ್ನಿ: ತೆಶುಬ್, ಕೈರಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 14:14 IST
Last Updated 30 ಜುಲೈ 2023, 14:14 IST
ಪ್ರಶಸ್ತಿಯೊಂದಿಗೆ ಕೈರಾ ಬಾಳಿಗ ಮತ್ತು ತೆಶುಬ್ ದಿನೇಶ್ 
ಪ್ರಶಸ್ತಿಯೊಂದಿಗೆ ಕೈರಾ ಬಾಳಿಗ ಮತ್ತು ತೆಶುಬ್ ದಿನೇಶ್    

ಬೆಂಗಳೂರು: ತೆಶುಬ್ ದಿನೇಶ್ ಮತ್ತು ಕೈರಾ ಬಾಳಿಾ ಅವರು ಭಾನುವಾರ ಮಲ್ಲೇಶ್ವರದ ಕೆನರಾ ಯೂನಿಯನ್ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ರ್‍ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

ಬಾಲಕರ ಫೈನಲ್‌ ಪಂದ್ಯದಲ್ಲಿ ತೆಶುಬ್ ಅವರು ಗೌರವ್‌ ಗೌಡ ಅವರನ್ನು 11–9, 11–8, 11–5ರಿಂದ ಮಣಿಸಿದರು. ಸೆಮಿಫೈನಲ್‌ನಲ್ಲಿ ತೆಶುಬ್‌ ಅವರು ಎನ್‌. ಅರ್ಣವ್ ಅವರನ್ನು ಮತ್ತು ಗೌರವ್‌ ಅವರು ಆರ್ಯ ಎ. ಜೈನ್‌ ಅವರನ್ನು ಪರಾಭವಗೊಳಿಸಿದ್ದರು.

ಬಾಲಕಿಯರ ಫೈನಲ್‌ ಪಂದ್ಯದಲ್ಲಿ ಕೈರಾ ಅವರು ಹಿಮಾಂಶಿ ಚೌಧರಿ ಅವರನ್ನು 11–12, 8–11, 12–10, 11–8, 11–9ರಿಂದ ಮಣಿಸಿದರು. ಹಿಮಾಂಶಿ ಮೊದಲ ಎರಡು ಗೇಮ್‌ ಗೆದ್ದರೂ ನಂತರದ ಮೂರು ಗೇಮ್‌ಗಳಲ್ಲಿ ಕೈರಾ ಮೇಲುಗೈ ಸಾಧಿಸಿದರು.

ADVERTISEMENT

ಸೆಮಿಫೈನಲ್‌ನಲ್ಲಿ ಹಿಮಾಂಶಿ ಅವರು ಆಯುಷಿ ಬಿ.ಗೋಡ್ಸೆ ಅವರನ್ನು ಮತ್ತು ಕೈರಾ ಅವರು ಶಿವಾನಿ ಮಹೇಂದ್ರನ್‌ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.