ಕ್ಯಾಂಪಸ್
ಮಂಗಳೂರಿನ ಕರಂಗಲಪಾಡಿಯ `ಎಕ್ಸಲೆಂಟ್ ಕೋಚಿಂಗ್ ಕ್ಲಾಸ್~ ಉನ್ನತ ಶಿಕ್ಷಣಕ್ಕೆ ಪ್ರವೇಶಾವಕಾಶ ಬಯಸುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
9 ವರ್ಷಗಳಿಂದ ಮಂಗಳೂರಿನಲ್ಲಿ ಎಸ್ಎಸ್ಎಲ್ಸಿ, ಸಿಇಟಿ, ಪಿಯುಸಿಗೆ ತರಬೇತಿ ನೀಡುತ್ತಾ ಬಂದಿದ್ದು ಸತತವಾಗಿ ಶೇ 100 ಫಲಿತಾಂಶ ದಾಖಲಿಸಿದೆ. ಇಲ್ಲಿ ತರಬೇತಿ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶಾವಕಾಶ ಪಡೆದಿರುತ್ತಾರೆ.
ಸಂಸ್ಥೆಯು ಎಪ್ರಿಲ್- ಮೇನಲ್ಲಿ ನಡೆಸುವ ರಜಾ ಅವಧಿಯ ತರಬೇತಿಯ ಲಾಭವನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳು ಪಡೆದಿದ್ದಾರೆ. ಪೋಷಕರ ಆಗ್ರಹದ ಮೇಲೆ ಈಗ ಮೈಸೂರು, ಬೆಂಗಳೂರು, ಮಂಡ್ಯ, ತುಮಕೂರು, ಹುಬ್ಬಳ್ಳಿ, ವಿಜಾಪುರ ಹಾಗೂ ಇಳಕಲ್ ನಗರಗಳಲ್ಲಿ ಎಕ್ಸಲೆಂಟ್ ಶಾಖೆಯನ್ನು ಆರಂಭಿಸಿದೆ.
ಈ ಎಲ್ಲಾ ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ, ಸಿಇಟಿ, ಪಿಯುಸಿ ತರಬೇತಿಗೆ ದಾಖಲಾತಿಯನ್ನು ಪ್ರಾರಂಭಿಸಿದೆ. ತರಬೇತಿಗೆ ಬರುವ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಪ್ರತ್ಯೇಕ ವಸತಿ ವ್ಯವಸ್ಥೆ ಇರುತ್ತದೆ.
ಪ್ರಸ್ತುತ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿಗೆ, ಪ್ರಥಮ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಗೆ ಮತ್ತು ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಿಇಟಿ ತರಬೇತಿಗೆ ಹೆಸರು ನೋಂದಾಯಿಸಬಹುದು.
ಪ್ರತಿಯೊಬ್ಬರಿಗೂ ಒಂದು ವರ್ಷದ ಪಠ್ಯಕ್ರಮದ ನೋಟ್ಸ್ ನೀಡಲಾಗುತ್ತದೆ. ಸಂಸ್ಥೆಯು ಈ ವರ್ಷದಿಂದ ಮಂಗಳೂರಿನಲ್ಲಿ ಪಿಯುಸಿ (ಕಾಮರ್ಸ್), ಬಿಕಾಂ, ಬಿಎಸ್ಸಿ, ಬಿಬಿ, ಎಂಕಾ, ಎಂಎಸ್ಸಿ ಮತ್ತು ಎಂಜಿನಿಯರಿಂಗ್ ಡಿಪ್ಲೊಮಾ ತರಬೇತಿ ಆರಂಭಿಸಿದೆ.
ಮಾಹಿತಿಗೆ: 99459 33230, 99863 70340.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.