ಬೆಂಗಳೂರು: ರಾಗಿ, ಜೋಳ ಮತ್ತು ಭತ್ತಕ್ಕೆ ಕೇಂದ್ರ ಸರ್ಕಾರ 2015–16ನೇ ಸಾಲಿಗೆ ಬೆಂಬಲ ಘೋಷಿಸಿದ್ದು, ಅದರ ಜತೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರವೂ ಪ್ರೋತ್ಸಾಹ ಧನ ನೀಡಲು ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕ್ವಿಂಟಲ್ ಸಾಮಾನ್ಯ ಭತ್ತಕ್ಕೆ ಕೇಂದ್ರ ಸರ್ಕಾರ ₹1,410 ನಿಗದಿಪಡಿಸಿದೆ. ಅದಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹100 ನೀಡಲಿದೆ. ಬಿಳಿ ಜೋಳಕ್ಕೆ (ಮಾಲ್ದಂಡಿ) ಕೇಂದ್ರ ಸರ್ಕಾರ ₹1,590 ನಿಗದಿಪಡಿಸಿದೆ. ಅದಕ್ಕೆ ರಾಜ್ಯ ಸರ್ಕಾರ ₹450 ಹೆಚ್ಚುವರಿಯಾಗಿ ನೀಡಲಿದ್ದು, ಒಟ್ಟು ₹2040ಕ್ಕೆ ರೈತರಿಂದ ಖರೀದಿಸಲಿದೆ.
ಕಳೆದ ವರ್ಷ ಈ ಜೋಳವನ್ನು ₹2,300ಕ್ಕೆ ಖರೀದಿ ಮಾಡಲಾಗಿತ್ತು. ಈ ಬಾರಿ ಹೆಚ್ಚು ಬೆಳೆ ಬಂದ ಕಾರಣ ಖರೀದಿ ದರ ಇಳಿಸಲಾಗಿದೆ. ರಾಗಿಗೆ ಕೇಂದ್ರ ಸರ್ಕಾರ ₹1,650 ನಿಗದಿಪಡಿಸಿದೆ. ಅದಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ₹450 ನೀಡಲಿದೆ. ಇದನ್ನೂ ₹2,100 ಕೊಟ್ಟು ರೈತರಿಂದ ಖರೀದಿಸಲು ತೀರ್ಮಾನಿಸಲಾಗಿದೆ.
*
ಇತರ ಪ್ರಮುಖ ತೀರ್ಮಾನಗಳು
* ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ 15 ‘ಸಿ’ ವರ್ಗದ ಗಣಿಗಳಲ್ಲಿನ ಕಬ್ಬಿಣದ ಅದಿರು ಪತ್ತೆಗೆ ಕೇಂದ್ರ ಸರ್ಕಾರದ ಖನಿಜ ಶೋಧ ನಿಗಮಕ್ಕೆ (ಎಂಇಸಿಎಲ್) ವಹಿಸಲು ತೀರ್ಮಾನ. ಈ ಸಲುವಾಗಿ ನಿಗಮಕ್ಕೆ ₹82.35 ಕೋಟಿ ಕೊಟ್ಟು, ಅದರ ಜತೆ ಒಡಂಬಡಿಕೆ. ನಿಗಮವು ಸೂಚಿತ ಗಣಿಗಳಲ್ಲಿ ಎಷ್ಟು ಪ್ರಮಾಣದ ಮತ್ತು ಯಾವ ಗುಣಮಟ್ಟದ ಅದಿರು ಸಿಗುತ್ತದೆ ಎಂಬುದನ್ನು ಪತ್ತೆಹಚ್ಚಿ ಸರ್ಕಾರಕ್ಕೆ ವರದಿ ನೀಡಲಿದೆ. ಬಳಿಕ ಅಂತಹ ಗಣಿ ಪ್ರದೇಶಗಳನ್ನು ಸರ್ಕಾರ ಹರಾಜು ಹಾಕಲಿದೆ.
*ಪ್ರವಾಸೋದ್ಯಮ ನೀತಿಯ ಪ್ರಕಾರ ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡುವವರಿಗೆ ಮುದ್ರಾಂಕ ಶುಲ್ಕದಿಂದ ವಿನಾಯಿತಿ
* ಮೈಸೂರಿನ ವರುಣಾ ಹೋಬಳಿಯ ಚೋರನಹಳ್ಳಿಯಲ್ಲಿನ 10 ಎಕರೆ ಜಾಗವನ್ನು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗೆ ಉಚಿತವಾಗಿ ಮಂಜೂರು
* ದೇವರಾಜ ಅರಸು ಶತಮಾನೋತ್ಸವ ಸಮಿತಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ನಿವೃತ್ತ ಹೆಚ್ಚುವರಿ ನಿರ್ದೇಶಕ ತಿಪ್ಪೇಸ್ವಾಮಿ ನೇಮಕ
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.