ADVERTISEMENT

ದೌಲತ್‌ಪುರಕ್ಕೆ ಬಸ್‌: ಗ್ರಾಮಸ್ಥರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 8:56 IST
Last Updated 23 ಮಾರ್ಚ್ 2018, 8:56 IST

ಸಂಡೂರು: ತಾಲ್ಲೂಕಿನ ದೌಲತ್‌ಪುರ ಗ್ರಾಮಕ್ಕೆ ಬುಧವಾರದಿಂದ ಬಸ್‌ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿದ್ದಕ್ಕೆ ಗ್ರಾಮಸ್ಥರು, ಐಡಿಎಸ್‌ಒ ಸಂಘಟನೆಯ ಮುಖಂಡರು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಎಐಡಿಎಸ್ಒ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ, ‘ಸಂಘಟನಾತ್ಮಕ ಹೋರಾಟದ ಫಲವಾಗಿ ಗ್ರಾಮಕ್ಕೆ ಬಸ್‌ ಸೌಲಭ್ಯ ದೊರಕಿತು. ಬಸ್‌ ಸೌಲಭ್ಯ ಒದಗಿಸಿದ್ದಕ್ಕೆ ಅಧಿಕಾರಿಗಳಿಗೆ ಅಭಿನಂದನೆಗಳು’ ಎಂದರು.

ಗ್ರಾಮಸ್ಥರಾದ ಮೆಹಬೂಬ್‌ಸಾಬ್, ಅನಿಲ್, ಸಲೀಂ, ಸುರೇಶ್, ಭೀಮಣ್ಣ, ಮಂಜುಳಾ, ಸೌಮ್ಯ, ರಮೇಶ್, ರಾಯಣ್ಣ ಇದ್ದರು.

ADVERTISEMENT

ಬಸ್‌ ಸೌಲಭ್ಯ ಒದಗಿಸಲು ಆಗ್ರಹಿಸಿ  ಎಐಡಿಎಸ್‌ಒ ಹಾಗೂ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷಗಳ ನೇತೃತ್ವದಲ್ಲಿ ಗ್ರಾಮದ ವಿದ್ಯಾರ್ಥಿಗಳು  ಪಟ್ಟಣದ ಬಸ್ ಘಟಕದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.