ADVERTISEMENT

‘ರಸ್ತೆ ಉಬ್ಬಿಗೆ ಬಣ್ಣ ಹಚ್ಚಿ’

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 6:02 IST
Last Updated 18 ನವೆಂಬರ್ 2017, 6:02 IST

ವಿಜಯಪುರ: ದೇವನಹಳ್ಳಿ ಸೂಲಿಬೆಲೆ ನಡುವಿನ ಮುಖ್ಯಹೆದ್ದಾರಿಯ ನಡುವಿನ ಬಾಲೇಪುರದ ಬಳಿ ನಿರ್ಮಿಸಿದ ರಸ್ತೆ ಉಬ್ಬಿಗೆ ಪಟ್ಟಿಗಳನ್ನು ಅಳವಡಿಸಬೇಕು ಎಂದು ಸ್ಥಳೀಯರಾದ ರಾಮಮೂರ್ತಿ, ಅಶೋಕ್, ಆಂಜನಮೂರ್ತಿ ಒತ್ತಾಯಿಸಿದರು.

ಹೆದ್ದಾರಿಯಲ್ಲಿ ದೇವನಹಳ್ಳಿ ಗಡಿಯ ಬಳಿ ನಡುರಸ್ತೆಯಲ್ಲಿ ನಿರ್ಮಿಸಿರುವ ರಸ್ತೆ ಉಬ್ಬು ಗುರುತಿಸಲಾರದೆ ವಾಹನ ಸವಾರರು ಅಪಘಾತಗಳಿಗೆ ಒಳಗಾಗುತ್ತಿದ್ದಾರೆ ಎಂದು ದೂರಿದರು.

ರಸ್ತೆಯಲ್ಲಿ ಉಬ್ಬಿಗೆ ಬಿಳಿ ಪೇಂಟ್‌ನಿಂದ ಪಟ್ಟಿಗಳನ್ನು ಬಳಿಯಬೇಕು. ಹೆದ್ದಾರಿಯಲ್ಲಿ ಲೊಕೋಪಯೋಗಿ ಇಲಾಖೆಯಿಂದ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.