ADVERTISEMENT

ಸಂಚಾರಕ್ಕೆ ಅನುಕೂಲಕರ ವಾತಾವರಣ ಇಲ್ಲ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2017, 5:16 IST
Last Updated 4 ನವೆಂಬರ್ 2017, 5:16 IST

ವಿಜಯಪುರ: ಜೀವ ಜೀವನ ತುಂಬಾ ಅತ್ಯಮೂಲ್ಯ. ಅದರ ಸುರಕ್ಷತೆಗೆ ಎಚ್ಚರಿಕೆ ವಹಿಸಬೇಕು. ರಕ್ಷಣೆ ಭಾಗವಾಗಿ ಉತ್ತಮವಾಗಿ ಪ್ರಯಾಣಿಸಬೇಕು ಎಂದು ಜಾಗೃತಿ ಮೂಡಿಸುವ ಅಧಿಕಾರಿಗಳು, ನಾಗರಿಕರ ಸುಗಮ ಸಂಚಾರಕ್ಕೆ ಅನುಕೂಲವಾದ ವಾತಾವರಣ ನಿರ್ಮಾಣ ಮಾಡಿಕೊಟ್ಟಿಲ್ಲ ಎಂದು ಸ್ಥಳೀಯರಾದ ಜಯಂತ್, ಸುರೇಶ್, ಪ್ರಕಾಶ್ ಆರೋಪಿಸಿದ್ದಾರೆ.

ವಿಜಯಪುರದಿಂದ ಶಿಡ್ಲಘಟ್ಟಕ್ಕೆ ಸಂಚಾರ ಮಾಡುವ ಮುಖ್ಯರಸ್ತೆಯಲ್ಲಿ ಭಟ್ರೇನಹಳ್ಳಿ ಸಮೀಪದಲ್ಲಿ ರಸ್ತೆಯ ಇಕ್ಕೆಲುಗಳಲ್ಲಿನ ಹಳ್ಳಗಳನ್ನು ಮುಚ್ಚುವಂತೆ ಆವರು ಒತ್ತಾಯಿಸಿದ್ದಾರೆ.

ಭಟ್ರೇನಹಳ್ಳಿಯ ಸಮೀಪ ಸ್ವಾಮಿ ವಿವೇಕಾನಂದ ಕಾಲೇಜು ಇದೆ. ಅಂಕತಟ್ಟಿ ಗೇಟ್‌ನಲ್ಲಿ ವಿದ್ಯಾದ್ರಿ ಕಾಲೇಜು ಇದೆ. ನೂರಾರು ಮಂದಿ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಪ್ರತಿನಿತ್ಯ ನೂರಾರು ಬಸ್ಸುಗಳು ಈ ರಸ್ತೆಯಲ್ಲಿ ಸಂಚಾರ ಮಾಡುತ್ತವೆ.

ADVERTISEMENT

ರಸ್ತೆಗೆ ಡಾಂಬರೀಕರಣ ಮಾಡಿದ್ದರೂ ಇಕ್ಕೆಲಗಳಲ್ಲಿ ನೀರು ಹರಿದು ಬಿದ್ದಿರುವ ಹಳ್ಳಗಳಿಂದ ಇಲ್ಲಿಂದ ಸಂಚಾರ ಮಾಡುವ ದ್ವಿಚಕ್ರ ವಾಹನ ಸವಾರರು, ಸೈಕಲ್ ಸವಾರರು, ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.