ADVERTISEMENT

₹30 ಸಾವಿರ ಮೌಲ್ಯದ ರಾಗಿಮೆದೆ ಭಸ್ಮ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 7:04 IST
Last Updated 14 ಮಾರ್ಚ್ 2018, 7:04 IST

ತಿಪ್ಪಸಂದ್ರ (ಮಾಗಡಿ): ಹೋಬಳಿಯ ಹೊನ್ನಾಪುರದಲ್ಲಿ ದುಷ್ಕರ್ಮಿಗಳು ಹಚ್ಚಿದ್ದ ಬೆಂಕಿಗೆ ಲಕ್ಷ್ಮಮ್ಮ ಅವರ ಸುಮಾರು ₹30 ಸಾವಿರ ಬೆಲೆ ಬಾಳುವ ರಾಗಿಮೆದೆ ಭಸ್ಮವಾಗಿದೆ ಎಂದು ಮುಖಂಡ ಶಿವಪ್ರಸಾದ್‌ ತಿಳಿಸಿದ್ದಾರೆ.

ರಾಗಿಮೆದೆ ಬೆಂದು ಹೋಗಿದೆ. ಎರಡು ಎಕರೆ ಭೂಮಿಯಲ್ಲಿ ಲಕ್ಷ್ಮಮ್ಮ ಕಷ್ಟಪಟ್ಟು ಸಾಲ ಮಾಡಿ ಬೆಳೆದಿದ್ದ ಮೆದೆಗೆ ದುಷ್ಕರ್ಮಿಗಳ ಬೆಂಕಿ ಇಟ್ಟ ವಿಷಯ ತಿಳಿದ ತಕ್ಷಣ ಗ್ರಾಮಸ್ಥರು ಹರಸಾಹಸ ಪಟ್ಟು ಬೆಂಕಿ ನಂದಿಸಿದರು. ಆದರೂ ರಾಗಿಮೆದೆ ಭಾಗಶಃ ಬೆಂದುಹೋಗಿದೆ. ಇದರಿಂದ ಅವರ ಕುಟುಂಬಕ್ಕೆ ನಷ್ಟವಾಗಿದೆ. ಸಾಲವನ್ನು ತೀರಿಸುವುದು ಕಷ್ಟ. ಇಂತ ಸಮಯದಲ್ಲಿ ಬೆಂಕಿ ಬಿದ್ದಿರುವುದು ನೋವಿನ ಸಂಗತಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT