ಬೈಲಹೊಂಗಲ: ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಡಾ.ವಿಶ್ವನಾಥ ಈರನಗೌಡ ಪಾಟೀಲ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಮೆರವಣಿಗೆ ನಡೆಸಿ, ಚುನಾವಣಾಧಿಕಾರಿ ಕೆ.ಸಿ.ದೊರೆಸ್ವಾಮಿ ಅವರಿಗೆ ಸೋಮವಾರ ನಾಮಪತ್ರ ಸಲ್ಲಿಸಿದರು.
ಮರಡಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಬೆಳಗ್ಗೆ 11ಕ್ಕೆ ಸೇರಿದ ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ವಿಶ್ವನಾಥ ಪಾಟೀಲರಿಗೆ ಜೈಕಾರ ಹಾಕಿದರು. ದಂಪತಿ ಸಹಿತ ಚಕ್ಕಡಿಯಲ್ಲಿ ಮೆರವಣಿಗೆ ತೆರಳಿದ ಶಾಸಕರು, ಮರಡಿ ಬಸವೇಶ್ವರ ದೇವಸ್ಥಾನ ಆವರಣದಿಂದ ಮೇದಾರ ಗಲ್ಲಿ, ಬೆಲ್ಲದ ಕೂಟ, ಉಪ್ಪಿನ ಕೂಟ, ಪ್ರಮುಖ ಬಜಾರ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಾಗಿದರು.
ಬಿಜೆಪಿ ಧ್ವಜ, ಕೇಸರಿ ಬಾವುಟಗಳು ರಸ್ತೆಯಲ್ಲಿ ರಾರಾಜಿಸಿದವು. ಲಂಬಾಣಿ ಮಹಿಳೆಯರ ನೃತ್ಯ ಗಮನ ಸೆಳೆಯಿತು. ಸಂಸದ ಸುರೇಶ ಅಂಗಡಿ ವಿಶ್ವನಾಥ ಪಾಟೀಲರಿಗೆ ಬೆಂಬಲ ನೀಡಿ ಚಕ್ಕಡಿಯಲ್ಲಿ ಸಾಗಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೂಳಪ್ಪ ಹೊಸಮನಿ, ಮಂಡಲ ಬಿಜೆಪಿ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಸಾಂಸ್ಕೃತಿಕ ಪ್ರಕೋಷ್ಠ ಅಧ್ಯಕ್ಷ ಸಿ.ಕೆ.ಮೆಕ್ಕೇದ, ಗುರುಪಾದ ಕಳ್ಳಿ, ಮೊಹಮ್ಮದ್ ನದಾಫ, ಶ್ರೀಶೈಲ ಯಡಳ್ಳಿ, ಮಹೇಶ ಹರಕುಣಿ, ರುದ್ರಪ್ಪ ಹೊಸಮನಿ, ಸೋಮನಾಥ ಸೊಪ್ಪಿಮಠ, ರಾಜು ಸೊಗಲ, ರಾಜು ಕುಡಸೋಮಣ್ಣವರ, ನಿಂಗಪ್ಪ ಚೌಡನ್ನವರ, ಸಂಜಯ ಗಿರೆಪ್ಪಗೌಡರ, ಬಸನಗೌಡ ಪಾಟೀಲ, ವಿಶಾಲ ಹೊಸೂರ, ಸೋಮನಾಥ ಸೊಪ್ಪಿಮಠ, ಮಡಿವಾಳಪ್ಪ ಚಳಕೊಪ್ಪ, ಎಫ್.ಎಸ್. ಸಿದ್ದನಗೌಡರ, ವೀರೇಶ ಹೊಳೆಪ್ಪನವರ, ಮಹಾಂತೇಶ ಹರಕುಣಿ, ವಿಶ್ವನಾಥ ಮೂಗಿ, ಉಮೇಶ ಮುುಪ್ಪಯ್ಯನವರಮಠ, ಸುರೇಶ ಮಾಟೊಳ್ಳಿ, ಶ್ರೀಕಾಂತ ಶಿರಹಟ್ಟಿ, ಅನೀತಾ ಪಾಟೀಲ, ಗಿರಿಜಾ ಪಟ್ಟಣಶಟ್ಟಿ, ಶಾಂತಕ್ಕಾ ಮಡ್ಡಿಕಾರ, ವಿದ್ಯಾ ರಾಮಣ್ಣವರ, ಅನಿತಾ ಹೋಟಿ, ದೀಪಾ ಜಕ್ಕಪ್ಪನವರ, ಶ್ರೀದೇವಿ ಹೋಟಿ, ರೂಪಾ ಯಡಳ್ಳಿ ಹಾಗೂ ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಪುರಸಭೆ ಬಿಜೆಪಿ ಸದಸ್ಯರು, ಮತಕ್ಷೇತ್ರದ 82 ಹಳ್ಳಿಗಳ ಜನರು ಸೇರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.