ADVERTISEMENT

ಅಶೋಕ ಚಂದರಗಿ ಅವರಿಗೆ ಮ.ರಾಮಮೂರ್ತಿ ದತ್ತಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 20:16 IST
Last Updated 22 ಮಾರ್ಚ್ 2018, 20:16 IST
ಅಶೋಕ ಚಂದರಗಿ ಅವರಿಗೆ ಚಿದಾನಂದಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಕಮಲಮ್ಮ, ಮನು ಬಳಿಗಾರ್‌, ಪಿ.ಮಲ್ಲಿಕಾರ್ಜುನಪ್ಪ, ರಾ.ನಂ.ಚಂದ್ರಶೇಖರ ಇದ್ದಾರೆ –ಪ್ರಜಾವಾಣಿ ಚಿತ್ರ
ಅಶೋಕ ಚಂದರಗಿ ಅವರಿಗೆ ಚಿದಾನಂದಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಕಮಲಮ್ಮ, ಮನು ಬಳಿಗಾರ್‌, ಪಿ.ಮಲ್ಲಿಕಾರ್ಜುನಪ್ಪ, ರಾ.ನಂ.ಚಂದ್ರಶೇಖರ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನ್ನಡಪರ ಹೋರಾಟಗಾರ ಮ.ರಾಮಮೂರ್ತಿ ಜನ್ಮಶತಮಾನೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದಲ್ಲಿ ಗುರುವಾರ ಆಚರಿಸಲಾಯಿತು.

ಕಮಲಮ್ಮ ಮ.ರಾಮಮೂರ್ತಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅವರಿಗೆ ಪರಿಷತ್ತು ವತಿಯಿಂದ ₹51,000 ನೀಡಲಾಯಿತು.

‘ಮ.ರಾಮಮೂರ್ತಿ ದತ್ತಿ ಪ್ರಶಸ್ತಿ’ಯನ್ನು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಸಂಶೋಧಕ ಎಂ.ಚಿದಾನಂದಮೂರ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹25,000 ನಗದು, ಸ್ಮರಣಿಕೆ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಪ್ರಶಸ್ತಿ ಮೊತ್ತವನ್ನು ಚಂದರಗಿ ಅವರು ಪರಿಷತ್ತಿಗೆ ಮರಳಿಸಿದರು. ಅದರಲ್ಲಿ ₹10 ಸಾವಿರವನ್ನು ಕಮಲಮ್ಮ ಅವರಿಗೆ ನೀಡಲಾಯಿತು. ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೂವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತಲಾ ₹5,000 ನೀಡುವಂತೆ ಚಂದರಗಿ ತಿಳಿಸಿದರು.

ADVERTISEMENT

ಮ.ರಾಮಮೂರ್ತಿ ಕುರಿತಾಗಿ ‘ಕನ್ನಡ ವೀರ ಸೇನಾನಿ’ ಎಂಬ ಕೃತಿಯನ್ನು ಲೇಖಕ ರಾ.ನಂ.ಚಂದ್ರಶೇಖರ ಹೊರತಂದಿದ್ದಾರೆ. ಅದನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್ ಬಿಡುಗಡೆಗೊಳಿಸಿದರು. 96 ಪುಟಗಳುಳ್ಳ ಆ ಕೃತಿಯ ಬೆಲೆ ₹60.

ಎಂ.ಚಿದಾನಂದಮೂರ್ತಿ, ‘ಬೆಳಗಾವಿಯು ರಾಜ್ಯದ ರಾಜಧಾನಿ ಆಗಬೇಕಿತ್ತು. ಅದಕ್ಕೆ ಬೇಕಾದ ಎಲ್ಲ ಅರ್ಹತೆಗಳು ಆ ಜಿಲ್ಲೆಗೆ ಇದೆ. ಆದರೆ, ಅದನ್ನು ರಾಜ್ಯದಲ್ಲಿಯೇ ಉಳಿಸಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ’ ಎಂದರು.

* ಇಂದು ಕನ್ನಡಪರ ಹೋರಾಟಗಳು ಬೂಟಾಟಿಕೆಯ ವೇಷ ತೊಟ್ಟಿವೆ. ಕತ್ತೆ ಹಾಗೂ ಕುದುರೆ ಮೆರವಣಿಗೆಗೆ ಸೀಮಿತಗೊಂಡಿವೆ.

–ಎಂ. ಚಿದಾನಂದಮೂರ್ತಿ, ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.