ಬೆಂಗಳೂರು: ನಮ್ಮ ಮೆಟ್ರೊ ಉತ್ತರ–ದಕ್ಷಿಣ ಕಾರಿಡಾರ್ನ ಶ್ರೀರಾಮಪುರ, ಕುವೆಂಪು ರಸ್ತೆ ಮತ್ತು ಸಂಪಿಗೆ ರಸ್ತೆ ನಿಲ್ದಾಣಗಳಲ್ಲಿ ಮೇ 10ರಿಂದ 16ರವರೆಗೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
‘ಸಂಪಿಗೆ ರಸ್ತೆ ನಿಲ್ದಾಣದಿಂದ ನ್ಯಾಷನಲ್ ಕಾಲೇಜು ನಿಲ್ದಾಣವರೆಗಿನ ಸುರಂಗ ಮಾರ್ಗದಲ್ಲಿ ವಾತಾಯನ ವ್ಯವಸ್ಥೆ, ಸಿಗ್ನಲಿಂಗ್, ರೈಲು ನಿಯಂತ್ರಣ ಪರೀಕ್ಷೆಗಳು ನಡೆಯುವ ಕಾರಣ ಈ ಮಾರ್ಪಾಡು ಮಾಡಲಾಗಿದೆ.’
‘ಈ ಅವಧಿಯಲ್ಲಿ ನಾಗಸಂದ್ರದಿಂದ ರಾಜಾಜಿನಗರದ ನಡುವೆ ಮೆಟ್ರೊ ಎಂದಿನಂತೆ ಸಂಚರಿಸಲಿದೆ. ರಾಜಾಜಿನಗರ ಮೆಟ್ರೊ ನಿಲ್ದಾಣದಿಂದ ಮೆಜೆಸ್ಟಿಕ್ನ ಕೆಂಪೇಗೌಡ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಸಂಪರ್ಕ ಒದಗಿಸಲಾಗುತ್ತದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.