ADVERTISEMENT

ಇಂದು ಎಸಿಪಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 20:31 IST
Last Updated 17 ನವೆಂಬರ್ 2017, 20:31 IST
ಎಸಿಪಿ ಮಂಜುನಾಥ್‌ಬಾಬು
ಎಸಿಪಿ ಮಂಜುನಾಥ್‌ಬಾಬು   

ಬೆಂಗಳೂರು: ಹೋಟೆಲ್ ಮಾಲೀಕ ರಾಜುಶೆಟ್ಟಿ ಮೇಲೆ ಎಸಿಪಿ ಮಂಜುನಾಥ್ ಬಾಬು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ಅವರು ರಾಜುಶೆಟ್ಟಿ ಹಾಗೂ ಹೋಟೆಲ್‌ ನೌಕರರ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಡಿಸಿಪಿ, ‘ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಗಳು ದಾಖಲಾಗಿರುವ ಡಿವಿಆರ್ ಪೆಟ್ಟಿಗೆಯನ್ನು ವಶಕ್ಕೆ ಪಡೆದಿದ್ದೇನೆ. ಹೋಟೆಲ್‌ ನೌಕರರನ್ನು ವಿಚಾರಣೆ ನಡೆಸಿ ಆ ದಿನ ಹೋಟೆಲ್‌ನಲ್ಲಿ ನಡೆದದ್ದೇನು ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ’ ಎಂದು ಹೇಳಿದರು.

‘ಎಸಿಪಿ ಹಾಗೂ ಅವರ ಜತೆಗಿದ್ದ ಕಾನ್‌ಸ್ಟೆಬಲ್ ಅವರನ್ನು ಶನಿವಾರ ವಿಚಾರಣೆ ನಡೆಸುತ್ತೇನೆ. ಬಳಿಕ ಸಮಗ್ರ ವರದಿ ಸಿದ್ಧಪಡಿಸಿ ಸೋಮವಾರ ಅದನ್ನು ಕಮಿಷನರ್‌ಗೆ ಸಲ್ಲಿಸು ತ್ತೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.