ADVERTISEMENT

ಎಲ್‌.ಸಿ.ನಾಗರಾಜ್‌ ವರ್ಗಾವಣೆಗೆ ಕೆ.ಎ.ಟಿ. ತಡೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 20:27 IST
Last Updated 5 ಅಕ್ಟೋಬರ್ 2015, 20:27 IST

ಬೆಂಗಳೂರು: ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಲ್‌.ಸಿ.ನಾಗರಾಜ್‌ ಅವರ ವರ್ಗಾವಣೆಗೆ ಕರ್ನಾಟಕ ಆಡಳಿತ  ನ್ಯಾಯಮಂಡಳಿ (ಕೆಎಟಿ) ಮಧ್ಯಂತರ ತಡೆ ನೀಡಿದೆ.

ಮಂಡಳಿಯ ಹಂಗಾಮಿ ಅಧ್ಯಕ್ಷ ಅಭಿಜಿತ್‌ ದಾಸ್‌ಗುಪ್ತಾ ಹಾಗೂ ನ್ಯಾಯಾಂಗ ಸದಸ್ಯ ಮೂಸಾ ಕುಂಞ ನಾಯರ್‌ಮೂಲೆ ಅವರಿದ್ದ ವಿಭಾಗೀಯ ಪೀಠವು ಸೋಮವಾರ ಅರ್ಜಿ ವಿಚಾರಣೆ ನಡೆಸಿತು.

‘ಇದು ನಿಗದಿತ ಅವಧಿಗೂ ಮುನ್ನ ಮಾಡಲಾಗಿರುವ ವರ್ಗಾವಣೆ’ ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠವು ಪುರಸ್ಕರಿಸಿ ತಡೆ ನೀಡಿತು.

ಅರ್ಜಿದಾರರ ಪರ ಎ.ವಿಶ್ವನಾಥ ಭಟ್‌ ವಕಾಲತ್ತು ವಹಿಸಿದ್ದರು.
ನಾಗರಾಜ್‌ ಅವರನ್ನು ಇತ್ತೀಚೆಗಷ್ಟೇ ಕರ್ನಾಟಕ ಗೃಹ ಮಂಡಳಿ ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗೆ ವರ್ಗ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.