ADVERTISEMENT

ಕವಿ ಲಕ್ಷ್ಮಣರಾವ್‌ಗೆ ಅಭಿನಂದನೆ ಅಕ್ಟೋಬರ್‌ 1ಕ್ಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 20:14 IST
Last Updated 28 ಸೆಪ್ಟೆಂಬರ್ 2016, 20:14 IST

ಬೆಂಗಳೂರು: ‘ಕವಿ ಬಿ.ಆರ್‌.ಲಕ್ಷ್ಮಣರಾವ್ ಅವರಿಗೆ 70 ವರ್ಷ  ತುಂಬಿದ ಸಲುವಾಗಿ ಅಕ್ಟೋಬರ್‌ 1ರಂದು ಜಯನಗರದ ಎಚ್.ಎನ್. ಕಲಾಕ್ಷೇತ್ರದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದು  ಅಭಿನಂದನಾ  ಸಮಿತಿಯ ಅಧ್ಯಕ್ಷ  ವೆಂಕಟೇಶಮೂರ್ತಿ ಶಿರೂರ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಕ್ಷ್ಮಣರಾವ್ ಅವರ 12 ಗೀತೆಗಳನ್ನು ಪ್ರಸಿದ್ಧ ಕಲಾವಿದರಿಂದ ಪ್ರಸ್ತುತ ಪಡಿಸಲಾಗುತ್ತದೆ.  ಅವರ ಕವಿತೆಗಳನ್ನು ಡಾ. ತಿಪ್ಪೇಸ್ವಾಮಿ ಅವರು  ಹಿಂದಿ ಭಾಷೆಗೆ ಅನುವಾದಿಸಿದ್ದು, ಈ ಕೃತಿಯನ್ನೂ  ಬಿಡುಗಡೆ ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.