ADVERTISEMENT

ದರೋಡೆಕೋರರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 19:53 IST
Last Updated 27 ಜುಲೈ 2016, 19:53 IST

ಹೊಸಕೋಟೆ: ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಲಾರಿ ಸಮೇತ ಪರಾರಿಯಾಗಿದ್ದ ಐವರು ದರೋಡೆಕೋರರನ್ನು ಹೊಸಕೋಟೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಹೊಸಕೋಟೆ ತಾಲ್ಲೂಕು ಕಟ್ಟಿಗೇನಹಳ್ಳಿ ಗ್ರಾಮದ ಇಮ್ರಾನ್ ಷರೀಫ್ (39), ನಜೀರ್ ಷರೀಫ್ (30), ಸೈಯದ್ ಸಾದಿಕ್ ಉಲ್ಲಾ (20), ಖದೀರ್ ಷರೀಫ್ (21) ಮತ್ತು ಬೆಂಗಳೂರಿನ ಯಲಚೇನಹಳ್ಳಿಯ ಚಾಂದ್ ಪಾಷ (37) ಬಂಧಿತ ಆರೋಪಿಗಳು.

ಆರೋಪಿಗಳು ಜುಲೈ 10 ರಂದು ರಾತ್ರಿ ಮಾಲೂರು ರಸ್ತೆಯ ಜಡಿಗೇನಹಳ್ಳಿ ಬಳಿ ಲಾರಿಯನ್ನು ಅಡ್ಡಗಟ್ಟಿ ಚಾಲಕನಿಗೆ ಚಾಕುವಿನಿಂದ ತಿವಿದು ಹಲ್ಲೆ ಮಾಡಿದ್ದರು.

ಆತನ ಬಳಿ ಇದ್ದ  ₹ 60 ಸಾವಿರ ನಗದು, ಮೊಬೈಲ್ ಕಿತ್ತುಕೊಂಡು ಲಾರಿ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಚಾಲಕ ತೆಲಂಗಾಣದ ಪಿ.ವೆಂಕಣ್ಣ ಪೊಲೀಸರಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.