ಬೆಂಗಳೂರು: ಪ್ರೆಸ್ಕ್ಲಬ್ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ಬೆಳಗ್ಗೆ 9ರಿಂದ 2 ಗಂಟೆ ರವರೆಗೆ ಚುನಾವಣೆ ನಡೆಯಿತು.
ಅಧ್ಯಕ್ಷ– ಸದಾಶಿವ ಶೆಣೈ, ಉಪಾಧ್ಯಕ್ಷ– ದೊಡ್ಡಬೊಮ್ಮಯ್ಯ, ಪ್ರಧಾನ ಕಾರ್ಯದರ್ಶಿ– ಕಿರಣ್, ಕಾರ್ಯದರ್ಶಿ– ಜನಾರ್ದನಾಚಾರಿ, ಖಜಾಂಚಿ– ಅಭಿಮನ್ಯು ರಮೇಶ್, ಜಂಟಿ ಕಾರ್ಯದರ್ಶಿ– ದೇವಿ ಶೆಟ್ಟಿ, ಕಾರ್ಯಕಾರಿ ಮಂಡಳಿ ಸದಸ್ಯರು– ಲಕ್ಷ್ಮೀ ಪ್ರಸನ್ನ ಬಾಬು ಆರ್., ಗಡಿ ನಾಗರಾಜು, ಮಹಾಂತೇಶ್ ಹಿರೇಮಠ್, ಜ್ಯೋತಿ ಇರ್ವತ್ತೂರು, ಸಾವಂತ್, ವಿರೂಪಾಕ್ಷ, ನಾರಾಯಣ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.