ADVERTISEMENT

ಬರ: ಸಚಿವ ಆಂಜನೇಯ ವಿದೇಶ ಪ್ರವಾಸ ರದ್ದು

ಸಿ.ಎಂ. ಸಿದ್ದರಾಮಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 20:12 IST
Last Updated 2 ಸೆಪ್ಟೆಂಬರ್ 2015, 20:12 IST

ಬೆಂಗಳೂರು: ದಲಿತ ಕಲಾವಿದರ ಜತೆ ಅಮೆರಿಕದ ಕರೋಲಿನಾದಲ್ಲಿ ನಡೆಯಲಿರುವ  ‘ನಾವಿಕ’ ಕನ್ನಡ ಸಮ್ಮೇಳನಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರಿಗೆ ಪ್ರವಾಸ ತೆರಳದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಬರ ಇರುವ ಕಾರಣ ಸಚಿವರು ವಿದೇಶ ಪ್ರವಾಸ ಹೋಗುವುದು ಬೇಡ ಎಂದು ಮುಖ್ಯಮಂತ್ರಿ ಸೂಚಿಸಿದರು ಎನ್ನಲಾಗಿದೆ. ಹೀಗಾಗಿ ಆಂಜನೇಯ ಅವರು ತಮ್ಮ ಪ್ರವಾಸವನ್ನು ರದ್ದುಪಡಿಸಿದ್ದಾರೆ. ನಾವಿಕ ಸಮ್ಮೇಳನ ಉದ್ಘಾಟನೆಗೆ ಸಂಘಟಕರು ಆಂಜನೇಯ ಅವರಿಗೆ ಆಹ್ವಾನ ನೀಡಿದ್ದರು.

ಈ ನಡುವೆ ದಲಿತ ಕಲಾವಿದರು ಸಚಿವರ ಪ್ರವಾಸ ರದ್ದಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದು, ತಮ್ಮ ಜತೆ ಸಚಿವರನ್ನೂ ಕರೆದೊಯ್ಯುವ ಪ್ರಯತ್ನ ನಡೆಸಿದ್ದಾರೆ. ಸಚಿವರಿಗೆ ತಮ್ಮ ಸ್ವಂತ ಖರ್ಚಿನಲ್ಲಾದರೂ ನಾವಿಕ ಸಮ್ಮೇಳನಕ್ಕೆ ಹೋಗಲು ಅವಕಾಶ ನೀಡಬೇಕೆಂದು ಕಲಾವಿದರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

*
ರಾಜ್ಯದಲ್ಲಿ ಬರ ಇರುವ ಕಾರಣ ವಿದೇಶ ಪ್ರವಾಸ ಬೇಡ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಹೀಗಾಗಿ ನಾನು ಹೋಗುತ್ತಿಲ್ಲ
-ಎಚ್‌.ಆಂಜನೇಯ,
ಸಮಾಜ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.