ADVERTISEMENT

‘ಮಹಾದಾಯಿ ವಿಚಾರದಲ್ಲೂ ಪಕ್ಷಗಳು ಒಟ್ಟಾಗಲಿ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:43 IST
Last Updated 26 ಸೆಪ್ಟೆಂಬರ್ 2016, 19:43 IST
ಕನ್ನಡ ಹೋರಾಟಗಾರ ಎಚ್‌.ರವೀಂದ್ರ, ಕನ್ನಡ ಚಳವಳಿ ಕೇಂದ್ರ ಸಮಿತಿಯ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಶಿವಕುಮಾರ್‌,  ಕನ್ನಡ ಹೋರಾಟಗಾರ್ತಿ ರಮಾದೇವಿ ವಿಶ್ವೇಶ್ವರಯ್ಯ,ರಫಾಯಿಲ್‌ ರಾಜ್‌, ತ.ನ.ಪ್ರಭುದೇವ ಅವರಿಗೆ ಜಿನಾಕು ಪ್ರಶಸ್ತಿ ಪ್ರದಾನ ಮಾಡಲಾಯಿತು.  ಟಿ.ಜಿ.ಶಿವಕುಮಾರ್,  ಹುಚ್ಚಪ್ಪ,ಗುರುದೇವ ನಾರಾಯಣ್‌ ಕುಮಾರ್‌,  ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಫಾಲನೇತ್ರ, ಬಿಬಿಎಂಪಿ ಸದಸ್ಯ ಆನಂದ ಹೊಸೂರು ಇದ್ದಾರೆ
ಕನ್ನಡ ಹೋರಾಟಗಾರ ಎಚ್‌.ರವೀಂದ್ರ, ಕನ್ನಡ ಚಳವಳಿ ಕೇಂದ್ರ ಸಮಿತಿಯ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಶಿವಕುಮಾರ್‌, ಕನ್ನಡ ಹೋರಾಟಗಾರ್ತಿ ರಮಾದೇವಿ ವಿಶ್ವೇಶ್ವರಯ್ಯ,ರಫಾಯಿಲ್‌ ರಾಜ್‌, ತ.ನ.ಪ್ರಭುದೇವ ಅವರಿಗೆ ಜಿನಾಕು ಪ್ರಶಸ್ತಿ ಪ್ರದಾನ ಮಾಡಲಾಯಿತು. ಟಿ.ಜಿ.ಶಿವಕುಮಾರ್, ಹುಚ್ಚಪ್ಪ,ಗುರುದೇವ ನಾರಾಯಣ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಫಾಲನೇತ್ರ, ಬಿಬಿಎಂಪಿ ಸದಸ್ಯ ಆನಂದ ಹೊಸೂರು ಇದ್ದಾರೆ   

ಬೆಂಗಳೂರು: ‘ಕಾವೇರಿ ವಿವಾದಕ್ಕೆ ಸಂಬಂಧಿಸಿ  ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಒಗ್ಗಟ್ಟಾಗಿವೆ. ಮಹಾದಾಯಿ ನದಿ ವಿವಾದಕ್ಕೆ ಸಂಬಂಧಿಸಿಯೂ ಇಂತಹದ್ದೇ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.

ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಮಾಜಿ ವಿಧಾನಸಭಾ ಸದಸ್ಯ ಜಿ.ನಾರಾಯಣ ಕುಮಾರ್‌ ಸಂಸ್ಮರಣೆ  ಹಾಗೂ ಜಿ.ನಾ.ಕು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾವೇರಿ ಹಾಗೂ ಮಹಾದಾಯಿ ರಾಜ್ಯದ  ಎರಡು ಕಣ್ಣುಗಳಿದ್ದಂತೆ. ರಾಜ್ಯದ ಜನರಿಗೆ ನ್ಯಾಯ ಒದಗಿಸಲು ರಾಜಕೀಯ ಒಗ್ಗಟ್ಟು ಮುಖ್ಯ. ನಾಡಿನ ಹಿತರಕ್ಷಣೆ ವಿಚಾರ ಬಂದಾಗ ಈ ಒಗ್ಗಟ್ಟು ನಿರಂತರ ಮುಂದುವರಿಯಬೇಕು’ ಎಂದು ಅವರು ಹೇಳಿದರು.

‘ಸುಪ್ರೀಂ ಕೋರ್ಟ್‌ ಆದೇಶ ಪಾಲಿಸದ ಕಾರಣಕ್ಕೆ ರಾಷ್ಟ್ರಪತಿ ಆಡಳಿತ ಹೇರುವ ಪರಸ್ಥಿತಿ ಎದುರಾದರೆ ಅಥವಾ ಮುಖ್ಯಮಂತ್ರಿಯ ವಿರುದ್ಧ ಕ್ರಮಕ್ಕೆ ಮುಂದಾದರೆ ಸಮಸ್ತ ಕನ್ನಡಿಗರು ಹೋರಾಟಕ್ಕೆ ನಡೆಸಬೇಕು.

ಈ ವಿಚಾರದಲ್ಲಿ, ಪ್ರಗತಿಪರ ಮಠಾಧೀಶರ ವೇದಿಕೆಯ ಸ್ವಾಮೀಜಿಗಳು  ಜೈಲಿಗೆ ಹೋಗಲು ಸಿದ್ಧರಿದ್ದೇವೆ’ ಎಂದರು. 
‘ಕಾವೇರಿ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಪ್ರವೇಶ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಕರಣ ಹಿಂದಕ್ಕೆ ಪಡೆಯಿರಿ: ‘ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ  ಪ್ರತಿಭಟನೆ ನಡೆಸಿದವರ ವಿರುದ್ಧ ದಾಖಲಿಸಿರುವ ಮೊಕದ್ದಮೆಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು’ ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.