ಬೆಂಗಳೂರು: ಲಕ್ಷ್ಮೀಪುರ ಘನತ್ಯಾಜ್ಯ ಘಟಕದ ಪಕ್ಕದಲ್ಲಿ ಸಂಗ್ರಹವಾದ ಕೊಳಚೆ ನೀರಿನಿಂದ ಅಂತರ್ಜಲ ಕಲುಷಿತ ಆಗದಂತೆ ತಡೆಯಲು ಖಾಸಗಿ ಸಂಸ್ಥೆ ಜತೆಗೂಡಿ ಗುತ್ತಿಗೆದಾರರು ಸೋಮವಾರ ರಾಸಾಯನಿಕ ದ್ರಾವಣ ಮಿಶ್ರಣ ಮಾಡುವ ವ್ಯವಸ್ಥೆ ಮಾಡಿದ್ದಾರೆ.
ಗುತ್ತಿಗೆದಾರರ ಜತೆ ‘ಪ್ರಾಪರ್ಟಿಲೂಪ್ಟಿ’ ಸಂಸ್ಥೆ ಕೈಜೋಡಿಸಿದೆ. ಈ ಘಟಕಕ್ಕೆ 10 ಸಾವಿರ ಲೀಟರ್ ದ್ರಾವಣದ ಅಗತ್ಯವಿದೆ. ಆದರೆ, ಸೋಮವಾರ 1,500 ಲೀಟರ್ ದ್ರಾವಣ ಸುರಿಯಲಾಗಿದೆ.
ದ್ರಾವಣ ಸುರಿಯುವ ಮುನ್ನ ಅಲ್ಲಿನ ಮಾದರಿ ಸಂಗ್ರಹಿಸಲಾಗಿದ್ದು, ಹತ್ತು ದಿನಗಳ ಬಳಿಕ ದ್ರಾವಣದಿಂದ ಆಗಿರುವ ಬದಲಾವಣೆಯನ್ನು ಅಭ್ಯಸಿಸಲಾಗುವುದು ಎಂದು ಪರಿಸರತಜ್ಞ ಕಿರಣ್ ಕುಲಕರ್ಣಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.