ADVERTISEMENT

ಶಕ್ತಿ ಪ್ರದರ್ಶನಕ್ಕಾಗಿ ಬಂದಿಲ್ಲ; ಜನರಿಗಾಗಿ ಬಂದಿದ್ದೇವೆ: ಶಿವರಾಜ್ ಕುಮಾರ್

​ಪ್ರಜಾವಾಣಿ ವಾರ್ತೆ
Published 30 ಜುಲೈ 2016, 9:47 IST
Last Updated 30 ಜುಲೈ 2016, 9:47 IST
ಶಕ್ತಿ ಪ್ರದರ್ಶನಕ್ಕಾಗಿ ಬಂದಿಲ್ಲ; ಜನರಿಗಾಗಿ ಬಂದಿದ್ದೇವೆ: ಶಿವರಾಜ್ ಕುಮಾರ್
ಶಕ್ತಿ ಪ್ರದರ್ಶನಕ್ಕಾಗಿ ಬಂದಿಲ್ಲ; ಜನರಿಗಾಗಿ ಬಂದಿದ್ದೇವೆ: ಶಿವರಾಜ್ ಕುಮಾರ್   

ಬೆಂಗಳೂರು: ಮಹಾದಾಯಿ ಮಧ್ಯಂತರ ತೀರ್ಪು ವಿರೋಧಿಸಿ ಶನಿವಾರ ನಡೆದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕನ್ನಡಪರ ಮತ್ತು ಕನ್ನಡ ಚಿತ್ರರಂಗ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದೆ. ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್‍ವರೆಗೆ ನಡೆಸಿದ ಬೃಹತ್ ಮೆರವಣಿಗೆಯಲ್ಲಿ ಚಿತ್ರೋದ್ಯಮದ ಹಲವು ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು.

ಈ ವೇಳೆ, ಫ್ರೀಡಂಪಾರ್ಕ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನಟ ಶಿವರಾಜ್ ಕುಮಾರ್ ನಾವು ಶಕ್ತಿ ಪ್ರದರ್ಶನಕ್ಕಾಗಿ ಬೀದಿಗಿಳಿದಿಲ್ಲ, ಜನರಿಗಾಗಿ ಬಂದಿದ್ದೇವೆ. ಜನರಿಗೆ ಬೆಂಬಲ ನೀಡಲು ಬಂದಿದ್ದೇವೆ. ಸುಮ್ಮನೆ ತಮಾಷೆಗಾಗಿ ಎಂದಿಗೂ ಹೋರಾಟ ಮಾಡಬಾರದು.

ನಮ್ಮ ಹೋರಾಟ ಅರ್ಥಪೂರ್ಣವಾಗಿರಬೇಕು. ಮಹಾದಾಯಿಗಾಗಿ ದೆಹಲಿವರೆಗೆ ಹೋಗಿ ಪ್ರತಿಭಟನೆ ನಡೆಸಲೂ ನಾವು ಸಿದ್ಧ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.