ADVERTISEMENT

14 ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 20:18 IST
Last Updated 3 ಮಾರ್ಚ್ 2017, 20:18 IST
ಪ್ರಶಸ್ತಿ ಪುರಸ್ಕೃತರು: ಮೊದಲ ಸಾಲು: ಎಸ್‌. ದೊಡ್ಡಣ್ಣ (ತೂಗುದೀಪ ಶ್ರೀನಿವಾಸ ಪ್ರಶಸ್ತಿ), ಬಿ.ಕೆ. ಸುಮಿತ್ರಾ (ಜಿ.ವಿ. ಅಯ್ಯರ್‌ ಪ್ರಶಸ್ತಿ),  ಬಿ.ವಿ. ರಾಧಾ (ಪಂಡರೀಬಾಯಿ ಪ್ರಶಸ್ತಿ),  ಆದವಾನಿ ಲಕ್ಷ್ಮಿದೇವಿ (ಎಂ.ವಿ. ರಾಜಮ್ಮ ಪ್ರಶಸ್ತಿ), ದೇವಿ (ಎಂ.ಪಿ. ಶಂಕರ್ ಪ್ರಶಸ್ತಿ),  ಪಾಲ್‌ ಎಸ್‌. ಚಂದಾನಿ (ಎನ್‌. ವೀರಸ್ವಾಮಿ ಪ್ರಶಸ್ತಿ), ಕುಮಾರ್‌ ಶೆಟ್ಟರ್‌ (ಬಿ. ಜಯಮ್ಮ ಪ್ರಶಸ್ತಿ). ಹಿಂಬದಿ ಸಾಲು: ಎನ್‌.ಎಲ್‌. ರಾಮಣ್ಣ (ಶಂಕರ್‌ನಾಗ್‌ ಪ್ರಶಸ್ತಿ), ಜೆ.ಕೆ. ಶ್ರೀನಿವಾಸಮೂರ್ತಿ (ಆರ್‌. ನಾಗೇಂದ್ರ ರಾವ್‌ ಪ್ರಶಸ್ತಿ), ಬಿ.ಎಲ್‌. ವೇಣು (ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ), ಎಂ.ಎಸ್‌. ಉಮೇಶ್‌ (ಟಿ.ಎನ್‌. ಬಾಲಕೃಷ್ಣ ಪ್ರಶಸ್ತಿ),  ರಾಮ್‌ ಶೆಟ್ಟಿ (ಕೆ.ಎನ್‌. ಟೇಲರ್‌ ಪ್ರಶಸ್ತಿ).
ಪ್ರಶಸ್ತಿ ಪುರಸ್ಕೃತರು: ಮೊದಲ ಸಾಲು: ಎಸ್‌. ದೊಡ್ಡಣ್ಣ (ತೂಗುದೀಪ ಶ್ರೀನಿವಾಸ ಪ್ರಶಸ್ತಿ), ಬಿ.ಕೆ. ಸುಮಿತ್ರಾ (ಜಿ.ವಿ. ಅಯ್ಯರ್‌ ಪ್ರಶಸ್ತಿ), ಬಿ.ವಿ. ರಾಧಾ (ಪಂಡರೀಬಾಯಿ ಪ್ರಶಸ್ತಿ), ಆದವಾನಿ ಲಕ್ಷ್ಮಿದೇವಿ (ಎಂ.ವಿ. ರಾಜಮ್ಮ ಪ್ರಶಸ್ತಿ), ದೇವಿ (ಎಂ.ಪಿ. ಶಂಕರ್ ಪ್ರಶಸ್ತಿ), ಪಾಲ್‌ ಎಸ್‌. ಚಂದಾನಿ (ಎನ್‌. ವೀರಸ್ವಾಮಿ ಪ್ರಶಸ್ತಿ), ಕುಮಾರ್‌ ಶೆಟ್ಟರ್‌ (ಬಿ. ಜಯಮ್ಮ ಪ್ರಶಸ್ತಿ). ಹಿಂಬದಿ ಸಾಲು: ಎನ್‌.ಎಲ್‌. ರಾಮಣ್ಣ (ಶಂಕರ್‌ನಾಗ್‌ ಪ್ರಶಸ್ತಿ), ಜೆ.ಕೆ. ಶ್ರೀನಿವಾಸಮೂರ್ತಿ (ಆರ್‌. ನಾಗೇಂದ್ರ ರಾವ್‌ ಪ್ರಶಸ್ತಿ), ಬಿ.ಎಲ್‌. ವೇಣು (ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ), ಎಂ.ಎಸ್‌. ಉಮೇಶ್‌ (ಟಿ.ಎನ್‌. ಬಾಲಕೃಷ್ಣ ಪ್ರಶಸ್ತಿ), ರಾಮ್‌ ಶೆಟ್ಟಿ (ಕೆ.ಎನ್‌. ಟೇಲರ್‌ ಪ್ರಶಸ್ತಿ).   

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ  ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ‘ಕನ್ನಡ ವಾಕ್ಚಿತ್ರದ ಹುಟ್ಟುಹಬ್ಬ’ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಪುರಭವನದಲ್ಲಿ ಶುಕ್ರವಾರ ನಡೆಯಿತು.

ಚಲನಚಿತ್ರ ರಂಗದ 14 ಸಾಧಕರಿಗೆ ವಸತಿ ಸಚಿವ ಎಂ. ಕೃಷ್ಣಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ತಲಾ ₹50 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ. ಸಿ. ಜಯರಾಂ (ಡಿ.ಶಂಕರ್‌ ಸಿಂಗ್‌ ಪ್ರಶಸ್ತಿ) ಪರವಾಗಿ ಪುತ್ರಿಯರು, ಎಸ್‌.ವಿ. ಶ್ರೀಕಾಂತ್‌ (  ಬಿ.ಎಸ್‌. ರಂಗ ಪ್ರಶಸ್ತಿ) ಪರವಾಗಿ ಛಾಯಾಗ್ರಾಹಕ ಬಸವರಾಜು ಪ್ರಶಸ್ತಿ ಸ್ವೀಕರಿಸಿದರು.

ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಮಾತನಾಡಿ, ‘ಮೈಸೂರಿನಲ್ಲಿ ಫಿಲಂ ಸಿಟಿ ಸ್ಥಾಪನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಅಲ್ಲಿ ಕಲಾವಿದರಿಗೆ ವಸತಿ ಸೌಕರ್ಯ ಕಲ್ಪಿಸಲು 100 ಎಕರೆ ಜಾಗ ಬೇಕು. ಜಾಗ ಗುರುತಿಸುವಂತೆ ವಸತಿ ಸಚಿವ ಎಂ. ಕೃಷ್ಣಪ್ಪ ಅವರು ಮೈಸೂರು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದ್ದಾರೆ. ಆದಷ್ಟು ಬೇಗ ಅದನ್ನು ಮಂಜೂರು ಮಾಡಬೇಕು. ಬಡ ಕಲಾವಿದರಿಗೆ ಬೆಂಗಳೂರಿನಲ್ಲಿ ಫ್ಲ್ಯಾಟ್‌ಗಳನ್ನು ನೀಡಬೇಕು’ ಎಂದು ವಿನಂತಿಸಿದರು.

ADVERTISEMENT

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ‘ನಮ್ಮ ಕಲಾವಿದರಿಗೆ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುವುದು ಮುಖ್ಯವಾಗಿದೆ. ಅವರು ನೈತಿಕತೆ ಮರೆತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.