ADVERTISEMENT

ಕಸದ ತೊಟ್ಟಿ ಅಳವಡಿಸಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 7:05 IST
Last Updated 14 ಸೆಪ್ಟೆಂಬರ್ 2017, 7:05 IST

ಹುಮನಾಬಾದ್: ಇಲ್ಲಿನ ಹಳೆ ಅಡತ್‌ ಬಜಾರ್ ವಾಟರ್‌ ಟ್ಯಾಂಕ್‌ ಹತ್ತಿರದ ರಸ್ತೆಯಲ್ಲಿ  ತ್ಯಾಜ್ಯ ಸಂಗ್ರಹಗೊಂಡು ಸಂಚಾರಕ್ಕೆ ತೊಂದರೆ ಆಗುತ್ತಿದೆ. ಸಾರ್ವಜನಿಕರು ಎಸೆಯುವ ತ್ಯಾಜ್ಯ ಸಂಗ್ರಹಿಸಲು ತೊಟ್ಟಿ ವ್ಯವಸ್ಥೆ ಇಲ್ಲದ್ದರಿಂದ ರಸ್ತೆಮಧ್ಯ ಚೆಲ್ಲಾಪಿಲ್ಲಿಯಾಗಿ ಹರಡಿ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಸಂಬಂಧಪಟ್ಟವರು ಶೀಘ್ರ ಕಸದ ತೊಟ್ಟಿ ಇಡುವ ಮೂಲಕ ಸಮಸ್ಯೆ ಬಗೆಹರಿಸಬೇಕು.

ಜೊತೆಯಲ್ಲಿ ಟ್ಯಾಂಕ್ ಪಕ್ಕದಲ್ಲೇ  ಸಾರ್ವಜನಿಕ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ಆದರೂ ವ್ಯಾಪಾರಿಗಳು ನೀರಿನ ಟ್ಯಾಂಕ್‌ ಸುತ್ತಮುತ್ತ ಮೂತ್ರ ವಿಸರ್ಜಿಸುತ್ತಿರುವ ಕಾರಣ ಗಬ್ಬು ನಾರುತ್ತಿದ್ದು, ಅದನ್ನು ತಡೆಗಟ್ಟಬೇಕು.
ರಾಘವೇಂದ್ರ ಜಾಜಿ
ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT