ADVERTISEMENT

ಕಾರ್ತಿಕ್ ರೆಡ್ಡಿ ಜಿಲ್ಲೆಯ ನೂತನ ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 4:43 IST
Last Updated 24 ಮಾರ್ಚ್ 2017, 4:43 IST

ಚಿಕ್ಕಬಳ್ಳಾಪುರ: ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ (ಎಸ್‌ಪಿ) ಎನ್‌.ಚೈತ್ರಾ ಅವರನ್ನು ರೈಲ್ವೆ ಇಲಾಖೆಗೆ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಗುರುವಾರ ಕಾರ್ತಿಕ್ ರೆಡ್ಡಿ ಅವರನ್ನು ಜಿಲ್ಲೆಯ ನೂತನ ಎಸ್‌ಪಿಯನ್ನಾಗಿ ನೇಮಕ ಮಾಡಿದೆ. ಕಾರ್ತಿಕ್ ರೆಡ್ಡಿ ಅವರು ಬೆಂಗಳೂರು ನಗರ (ಆಡಳಿತ) ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬದಲಾದ ವರ್ಗಾವಣೆ ನಿರ್ಧಾರ: ಬುಧವಾರ ಚೈತ್ರಾ ಅವರನ್ನು ರೈಲ್ವೆ ಇಲಾಖೆ ಎಸ್‌ಪಿಯಾಗಿ ವರ್ಗಾವಣೆ ಮಾಡಿದ ಸರ್ಕಾರ ಆ ಹುದ್ದೆಯಲ್ಲಿ ಅನೂಪ್ ಶೆಟ್ಟಿ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಎಸ್‌ಪಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಗುರುವಾರ ದಿಢೀರ್‌ ಆದೇಶವನ್ನು ಮಾರ್ಪಡಿಸಿ ಅನೂಪ್ ಶೆಟ್ಟಿ ಬದಲಿಗೆ ಕಾರ್ತಿಕ್ ರೆಡ್ಡಿ ಅವರನ್ನು ಜಿಲ್ಲೆಯ ಎಸ್ಪಿಯಾಗಿ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.