ADVERTISEMENT

ಅಕ್ರಮ ಮದ್ಯ: ಮಾಲು ಸಮೇತ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:38 IST
Last Updated 8 ಫೆಬ್ರುವರಿ 2017, 6:38 IST

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿ ಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಜಾಲವನ್ನು ಭೇದಿಸಿರುವ ಪೊಲೀಸರು ಮಾಲು ಸಮೇತ ಆರೋ ಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಸಿಗುವಾನಿ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿರುವ ಬಗ್ಗೆ ಖಚಿತ ದಾಳಿ ನಡೆಸಿd ಪೊಲೀಸರ ತಂಡ ಸಿಗುವಾನಿ ಗ್ರಾಮದ ಅಜಿತ್ ಎಂಬುವನನ್ನು  ಮಾಲು ಸಮೇತ ಬಂಧಿಸಿದ್ದಾರೆ.

ಸಿಗುವಾನಿ ಗ್ರಾಮದ ಅಜಿತ್, ಹಿಳುವಳ್ಳಿ ಗ್ರಾಮದ ರವಿ ಅಲಿಯಾಸ್ ಪೈಂಟರ್ ರವಿ ಹಾಗೂ ಈಗಾಗಲೇ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಬಂಧಿತನಾಗಿರುವ ನರೇಂದ್ರ ಅಲಿಯಾಸ್ ನರಿ ಎಂಬುವರು ಸೇರಿಕೊಂಡು ಶಿವಮೊಗ್ಗದ ನಿರಂಜನ್ ಎಂಬುವನಿಂದ ಮದ್ಯವನ್ನು ತಂದು ತಾಲ್ಲೂಕಿನಾದ್ಯಂತ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಅಜಿತ್ ಎಂಬುವನನ್ನು ಬಂಧಿಸಿ ದಾಗ ಕಾರಿನ ಡಿಕ್ಕಿಯಲ್ಲಿ ಪರವಾನಿಗೆ ಇಲ್ಲದೆ ಸಂಗ್ರಹಿಸಿದ್ದ  ₹24,182 ಮೌಲ್ಯದ 10 ಬಾಕ್ಸ್ ವಿವಿಧ ರೀತಿ ಮದ್ಯ ಪತ್ತೆಯಾಗಿದೆ. ರವಿ ಎಂಬ ಆರೋಪಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕಾರು ಹನಿಟ್ರ್ಯಾಪ್ ಪ್ರಕರಣದಲ್ಲಿ ಬಂಧಿತನಾಗಿರುವ ನರೇಂದ್ರ ಎಂಬುವನಿಗೆ ಸೇರಿದ್ದು ಎಂದು ತಿಳಿದುಬಂದಿದೆ. ದಾಳಿಯಲ್ಲಿ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ ಕೆ.ಆರ್. ಸುನಿತಾ, ಎಎಸ್‌ಐ ಕುಮಾರ ನಾಯ್ಕ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.