ಶೃಂಗೇರಿ: ಸ್ವಸಹಾಯ ಸಂಘಗಳು ಕೃಷಿಕರಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಆಗ ರೈತರು ಅರ್ಥಿಕವಾಗಿ ಸಬಲರಾಗಲು ಸಾಧ್ಯ. ನಮ್ಮ ಸಂಘವು ಈ ಬಾರಿ ಐದು ಸಾವಿರ ಚೀಲದ ವ್ಯಾಪಾರ ವಹಿವಾಟು ನಡೆಸಿದೆ ಎಂದು ಪ್ರಸನ್ನ ಗಣಪತಿ ಕೃಷಿಕ ಸಂಘದ ಅಧ್ಯಕ್ಷ ಮಂಜುನಾಥ್ ಸ್ವಾಮಿ ತಿಳಿಸಿದರು.
ತಾಲ್ಲೂಕಿನ ಹಿರೇಹಳ್ಳಿ ಪ್ರಸನ್ನ ಗಣಪತಿ ದೇವಾಲಯದ ಸಭಾಂಗಣದಲ್ಲಿ ಸಂಘವು ಬುಧವಾರ ಆಯೋಜಿಸಿದ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಭಾರತ ದೇಶದ ರೋಬೊಸ್ಟೊ ಕಾಫಿಗೆ ಇಟಲಿ, ಜರ್ಮನಿ, ಬೆಲ್ಜಿಯಂ ಮೊದಲಾದ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಸಂಘದ ಸದಸ್ಯರು ಕಾಫಿ ಬೆಳೆಗಳತ್ತ ಹೆಚ್ಚಿನ ಗಮನ ಹರಿಸಬೇಕು. ಪರಿಸರ ಸ್ನೇಹಿಯಾದ ಪಲ್ಪಿಂಗ್ ಘಟಕವನ್ನು ಕೂಡಲೇ ಪ್ರಾರಂಭಿಸಲಾಗುವುದು ಎಂದರು.
ವಸುಂಧರ ಕಾಫಿ ಮಾರುಕಟ್ಟೆ ನಿರ್ದೇಶಕರಾದ ಗೋಳ್ಗಾರ್ ಪ್ರಸನ್ನ ಮಾತನಾಡಿ, ‘ಮುಂಬರುವ ದಿನಗಳಲ್ಲಿ ಅಂತರರಾಷ್ಟ್ರೀಯ ಕಾಫಿ ವಹಿವಾಟು ನಡೆಸುವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಮಾರುಕಟ್ಟೆ ದರಕ್ಕಿಂತ ಉತ್ತಮ ಬೆಲೆ ರೈತರಿಗೆ ನೀಡಲಾಗುತ್ತದೆ.
ಮಾರುಕಟ್ಟೆಯ ಆಗುಹೋಗುಗಳ ಬಗ್ಗೆ ರೈತರು ಹೆಚ್ಚಿನ ಜ್ಞಾನ ಪಡೆಯಬೇಕಾಗಿದೆ. ಕಾಫಿಯ ಗುಣಮಟ್ಟ ಪರೀಕ್ಷೆಗೆ ಪ್ರಯೋಗಾಲಯ ಹಾಗೂ ಕೃಷಿ ತರಬೇತಿಯನ್ನು ಸಂಘದ ವತಿಯಿಂದ ಪ್ರಾರಂಭಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.