ADVERTISEMENT

‘ಚರ್ಚ್‌ ಜೀರ್ಣೋದ್ಧಾರಕ್ಕೆ ₹ 18 ಲಕ್ಷ ಅನುದಾನ’

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:53 IST
Last Updated 25 ಮೇ 2017, 5:53 IST

ಹೊಸದುರ್ಗ:  ಪಟ್ಟಣದ ಸಂತ ಲೋಕನಾ ಚರ್ಚ್‌ನ ಜೀರ್ಣೋದ್ಧಾರಕ್ಕೆ ರಾಜ್ಯ ಸರ್ಕಾರ ₹ 18 ಲಕ್ಷ ಅನುದಾನ ನೀಡಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.

ಚರ್ಚ್‌ನ ಮುಖಂಡರು ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಾಮಾಜಿಕ ಸಮಾನತೆಗೆ ಬದ್ಧವಾಗಿ ಆಡಳಿತ ನಡೆಸುತ್ತಿದೆ.

ಎಲ್ಲಾ ವರ್ಗದ ಸಮುದಾಯ ಭವನ, ದೇವಸ್ಥಾನದ ಜೀರ್ಣೋದ್ಧಾರ ಮೊದಲಾದ ಕಾರ್ಯಗಳಿಗೆ ಉದಾರವಾಗಿ ಅನುದಾನ ನೀಡಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಕೆ.ವಿ.ಸ್ವಾಮಿ, ಸದಸ್ಯೆ ಷಾಯಿನಾ ಇರ್ಫಾನ್‌, ಬೆಲ ಗೂರಿನ ಪ್ರಸನ್ನಕುಮಾರ್‌, ಚಂದ್ರ ಶೇಖರ್‌, ಚರ್ಚ್‌ ಮುಖ್ಯಸ್ಥ ರೆವೆರೆಂಡ್‌ ಅನಿಲಕುಮಾರ್‌ ನಿಲುಗಲ್‌, ಎಸ್‌ಡಿಎ ಶಾಲೆಯ ಸಂಜಯ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.