ADVERTISEMENT

ಇಂದಿನಿಂದ ಯುಪಿಎಲ್‌–ಟಿ10 ಟೂರ್ನಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 8:51 IST
Last Updated 17 ಏಪ್ರಿಲ್ 2017, 8:51 IST

ಮಂಗಳೂರು: ‘ಮಂಗಳೂರು ಎನ್ಎಂ ಪಿಟಿ ಪಣಂಬೂರು ಕ್ರಿಕೆಟ್‌ ಸ್ಟೇಡಿಯಂ ನಲ್ಲಿ ಇದೇ 17ರಿಂದ 23ರವರೆಗೆ ಅಂತ ರರಾಷ್ಟ್ರೀಯ ಮಟ್ಟದ ಉಡುಪಿ ಪ್ರೀಮಿ ಯರ್ ಲೀಗ್‌–ಟಿ10 ಕ್ರಿಕೆಟ್‌ ಟೂರ್ನಿ ನಡೆಯಲಿದೆ.‘ವಿವಿಧ ದೇಶಗಳ ಸುಮಾರು 20 ತಂಡಗಳು ಪಾಲ್ಗೊಳ್ಳಲಿವೆ’ ಎಂದು ಉಡುಪಿ ಪ್ರೀಮಿಯರ್‌ ಲೀಗ್‌ –ಟಿ10ನ ಉಪಾಧ್ಯಕ್ಷ ಮಹ್ಮದ್‌ ಮುಬೀನ್‌ ರಫೀಕ್‌ ಭಾನುವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

‘ಶಾಸಕ ಎಚ್‌.ಡಿ. ಕುಮಾರಸ್ವಾಮಿ ಅವರು ಟೂರ್ನಿಗೆ ಚಾಲನೆ ನೀಡಲಿ ದ್ದಾರೆ. ಸಚಿವ ಪ್ರಮೋದ್‌ ಮಧ್ವರಾಜ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಪಂದ್ಯವನ್ನು ಎಸ್‌ಎಬಿ ಅಸೋಸಿಯೇಶನ್‌ ಕಂಪೆನಿ ಅಧ್ಯಕ್ಷ ಸಲ್ಲಾಹುದ್ದೀನ್ ಸಲ್ಮಾನ್‌ ಉದ್ಘಾ ಟಿಸಲಿದ್ದಾರೆ. ಮಾಜಿ ಕ್ರಿಕೆಟಿಗರಾದ ಅಜ ರುದ್ದೀನ್‌, ಸುನೀಲ್‌ ಜೋಶಿ, ಸಚಿವ ರಾದ ರಮಾನಾಥ ರೈ, ಯು.ಟಿ. ಖಾದರ್‌, ಚಂದ್ರಶೇಖರ ಸ್ವಾಮೀಜಿ ಸೇರಿ ದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ವಿನ್ನರ್‌ ಅಪ್‌ ತಂಡಕ್ಕೆ ₹25 ಲಕ್ಷ, ರನ್ನರ ಅಪ್‌ ತಂಡಕ್ಕೆ ₹12, ಸೆಮಿ ಫೈನಲ್‌ ವಿಜೇತ ತಂಡಕ್ಕೆ ₹3 ಲಕ್ಷ ಬಹು ಮಾನ ಇದೆ. ಉತ್ತಮ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗೆ ಬೈಕ್‌, ಫೈನಲ್‌ ಟೂರ್ನಿ ಪಂದ್ಯ ಶ್ರೇಷ್ಠ ಆಟಗಾರನಿಗೆ ಬೈಕ್‌, ಸರಣಿ ಶೇಷ್ಠ ಆಟಗಾರನಿಗೆ ಕಾರು ಬಹುಮಾನವಾಗಿ ನೀಡಲಾಗುತ್ತದೆ. ಒಟ್ಟು ₹50 ಲಕ್ಷ ಮೊತ್ತದ ಬಹುಮಾನ ವಿದೆ. ಶ್ರೀಲಂಕಾ, ನೇಪಾಳ, ಭೂತಾನ್‌ ಹಾಗೂ ದೇಶದ ವಿವಿಧ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ’ ಎಂದು ಅವರು ತಿಳಿಸಿದರು. ಸಾದಿಕ್‌ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.