ADVERTISEMENT

ಕುತ್ತೆತ್ತೂರು ನಾಗರಿಕರಿಂದ ಪ್ರತಿಭಟನೆ

ಬೋರುಕಟ್ಟೆ-–ನಾಯರ್‌ಕೋಡಿ–ಬಾಜಾವು ರಸ್ತೆ ಧ್ವಂಸಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 5:35 IST
Last Updated 16 ಜನವರಿ 2017, 5:35 IST
ಕುತ್ತೆತ್ತೂರು ನಾಗರಿಕರಿಂದ ಪ್ರತಿಭಟನೆ
ಕುತ್ತೆತ್ತೂರು ನಾಗರಿಕರಿಂದ ಪ್ರತಿಭಟನೆ   

ಸುರತ್ಕಲ್:  ಪೆರ್ಮುದೆ ಗ್ರಾಮಪಂಚಾ ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದ ಬೋರುಕಟ್ಟೆ - ನಾಯರ್ ಕೋಡಿ - ಬಾಜಾವು ರಸ್ತೆಯನ್ನು  ಕೆಲವು ಖಾಸಗಿ ವ್ಯಕ್ತಿಗಳು ಭೂಮಿಯನ್ನು ಅಭಿವೃದ್ಧಿಪ ಡಿಸುವ ನೆಪದಲ್ಲಿ ನಾಶಪಡಿಸಿ ಪರಿಸರದ ಸುಮಾರು ಎಂಭತ್ತರಿಂದ ನೂರು ಮನೆ ಯವರಿಗೆ ತೊಂದರೆ ಉಂಟು ಮಾಡಿ ರುವುದನ್ನು ವಿರೋಧಿಸಿ ತೀವ್ರವಾದ ಪ್ರತಿಭಟನೆ ಇಂದು ಕುತ್ತೆತ್ತೂರಿನ ನಾಯರ್‌ಕೋಡಿ ಬಳಿ ನಡೆಯಿತು.

ಖಾಸಗಿಯವರಿಗೆ ಸೇರಿದ ಎರಡು ಸಂಸ್ಥೆಗಳು ಸುಮಾರು ನಲುವತ್ತು ಎಕರೆ ಪ್ರದೇಶದಲ್ಲಿ ಭೂ ಆಭಿವೃದ್ಧಿಯನ್ನು ಮಾಡುತ್ತಿರುವುದು, ರಸ್ತೆಯನ್ನು ಕಬಳಿ ಸಿದ ಬಗ್ಗೆ ಸ್ಥಳೀಯರಿಂದ ಪ್ರತಿಭಟನೆ ವ್ಯಕ್ತವಾದಾಗ ಒಂದು ಸಂಸ್ಥೆಯವರು ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಸಮಕ್ಷಮದಲ್ಲಿ ಕಂದಾಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ರಸ್ತೆಯನ್ನು ರಚಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡಲಾಗು ವುದು ಎಂದು ಪಂಚನಾಮೆಯ ಮೂಲಕ ಬರೆದು ಕೊಟ್ಟಿದ್ದರು.

ಆದರೆ ಇದರ ಪಕ್ಕದಲ್ಲಿ ಇನ್ನೊಂದು ಖಾಸಗಿ ಸಂಸ್ಥೆಗೆ ಸೇರಿದವರು ಭೂಮಿಯನ್ನು ಅಭಿವೃದ್ಧಿಪಡಿಸುತ್ತಿದ್ದು ಅವರು ಬೋರು ಕಟ್ಟೆ - ಬಾಜಾವು ಡಾಮಾರು ರಸ್ತೆಯನ್ನು ಸಂಪೂರ್ಣವಾಗಿ ಕಬಳಿಸಿ ರಸ್ತೆಯೇ ಇಲ್ಲದಂತೆ ಮಾಡಿ ಬಿಟ್ಟಿದ್ದಾರೆ. ಇಲ್ಲಿ ರಸ್ತೆ ಇರಲೇ ಇಲ್ಲ ಎಂಬ ಮೊಂಡು ವಾದ ವನ್ನು ಮಾಡುತ್ತಿದ್ದಾರೆ.

ಸ್ಥಳೀಯ ಶಾಸಕ ಅಭಯಚಂದ್ರ ಜೈನ್‌ರವರ 2008–09 ಶಾಸಕರ ನಿಧಿಯ ಅನುದಾನದಲ್ಲಿ ಎರಡು ಲಕ್ಷ ರೂಪಾಯಿಗಳ ಮೊತ್ತದಲ್ಲಿ ಪಂಚಾಯತ್‌ ರಾಜ್‌ ಇಲಾಖೆ ಮಂಗ ಳೂರು ಇವರು ನಿರ್ಮಾಣ ಮಾಡಿದ ಬೋರುಕಟ್ಟೆ ನಾಯರ್‌ಕೋಡಿ ಡಾಂಬ ರೀಕೃತ ರಸ್ತೆಯನ್ನು ನೆಲಸಮ ಮಾಡಲಾ ಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಈ ರಸ್ತೆಯಲ್ಲಿ ಹೋಗುವ ಹೆಂಗ ಸರು, ಹಿರಿಯನಾಗರಿಕರು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಕನಿಷ್ಠ ಗೌರವ ಕೊಡುವ ಕೆಲಸವನ್ನೂ ಇಲ್ಲಿ ಕೆಲಸ ಮಾಡುತ್ತಿರುವವರು ಮಾಡುತ್ತಿಲ್ಲ. ಎಲ್ಲಾ ಅಧಿಕಾರಿಗಳು ಯಾವುದೋ ಕಾರಣಕ್ಕಾಗಿ ಜನರನ್ನು ಮತ್ತು ಜನಪ್ರತಿ ನಿಧಿಗಳನ್ನು ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಬೋರುಕಟ್ಟೆಯಿಂದ ನಾಯರ್‌ಕೋಡಿ  ಮತ್ತು  ಬಾಜಾವಿಗೆ ಇದ್ದ ಸರ್ಕಾರಿ ರಸ್ತೆ ಯನ್ನು ಸಂಪೂರ್ಣವಾಗಿ ಹಾಳುಗೆಡ ವಿದ ಇವರು ಮೊದಲು ಇಲ್ಲಿ ಸುಸಜ್ಜಿ ತವಾದ ರಸ್ತೆಯನ್ನು ಮಾಡಿಕೊಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ  ಮುಂದುವರಿಯುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯೆ ಶಶಿಕಲಾ ಹೇಳಿದರು.

ಸ್ಥಳೀಯ  ನಿವಾಸಿ ಶಶಿಕಲಾ ನಾಯರ್ ಕೋಡಿಯವರು , ಈ ರಸ್ತೆ ಯನ್ನು ಹಾಳುಗೆಡವಿ ಸಂಚಾರ ಮಾಡ ಲು ತೊಂದರೆ ನೀಡಿದ ಬಗ್ಗೆ ನಾವು ಪಂಚಾಯತ್, ಜಿಲ್ಲಾ ಪಂಚಾಯತ್, ಶಾಸಕರು, ಸಂಸದರು ಮತ್ತು ಜಿಲ್ಲಾಧಿ ಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜ ನವಾಗಿಲ್ಲ. ರಸ್ತೆಯನ್ನು ಮುಚ್ಚುವ ಪ್ರಯ ತ್ನವನ್ನು ಯಾವುದೇ ಬೆಲೆ ತೆತ್ತು ತಡೆಯಲಾಗುವುದು ಎಂದರು.

ಪಂಚಾಯಿತಿ ಸದಸ್ಯ ಜಗನ್ನಾಥ ಶೆಟ್ಟಿ ರಸ್ತೆಯನ್ನು ಮುಚ್ಚುವುದರ ವಿರುದ್ಧ ಪಂಚಾಯಿತಿ ಸದಸ್ಯರು ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದನ್ನು ವಿವರಿಸಿದರು. ಕುತ್ತೆತ್ತೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ರಸ್ತೆಧ್ವಂಸ ಮಾಡಿದವರ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.