ADVERTISEMENT

ಮಧ್ಯಂತರ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 5:37 IST
Last Updated 22 ಸೆಪ್ಟೆಂಬರ್ 2017, 5:37 IST

ಗದಗ: ವೇತನ ಪರಿಷ್ಕರಣೆ ಆಯೋಗವು ವರದಿ ಸಲ್ಲಿಸುವುದನ್ನು 4ತಿಂಗಳು ಮುಂದೂಡಿರುವ ಹಿನ್ನೆಲೆಯಲ್ಲಿ ಶೇ30ರಷ್ಟು ಮಧ್ಯಂತರ ಪರಿಹಾರವನ್ನು ತಕ್ಷಣವೇ ಘೋಷಣೆ ಮಾಡಬೇಕು ಎಂದು ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘವು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಎಂ. ಆರ್. ಶ್ರೀನಿವಾಸಮೂರ್ತಿ ಆಯೋಗವು ವರದಿ ನೀಡಲು 2018ರ ಜನವರಿವರೆಗೆ ಅವಧಿ ವಿಸ್ತರಿಸಲಾಗಿದೆ. ಇದರಿಂದ ಆಯೋಗದ ಶಿಫಾರಸ್ಸು ವಿಳಂಬವಾಗಲಿದ್ದು, ಮಧ್ಯಂತರ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸಂಘದ ರಾಜ್ಯ ಕಾರ್ಯದರ್ಶಿ ಎಸ್.ಎಲ್. ಶೇಖರಗೋಳ, ಖಜಾಂಚಿ ಡಾ.ಬಿ.ಆರ್. ರಾಠೋಡ, ಡಾ.ಸುರೇಶ ಮುಳೆ, ಜಿ.ಸಿ. ಕುಲಕರ್ಣಿ, ಮೋಹನ ಸಿದ್ದಾಂತಿ, ಆರ್.ಕೆ. ರಂಗಣ್ಣವರ, ಎಸ್.ವಿ. ತಡಸಮಠ, ಪ್ರಲ್ಹಾದ ಯಾವಗಲ್, ಬಿ.ಪಿ. ಮಳ್ಳೂರ ಟಿ.ಎಚ್. ತಳವಾರ, ವಸಂತ ಮುರ್ಡೇಶ್ವರ, ಆರ್.ಜಿ. ಮಾಂಗ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT