ADVERTISEMENT

‘ರಾಜ್ಯ ಸರ್ಕಾರದಿಂದ ಜನ ಕಲ್ಯಾಣ ಯೋಜನೆ ಜಾರಿ'

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:39 IST
Last Updated 7 ನವೆಂಬರ್ 2017, 6:39 IST

ರೋಣ: ರಾಜ್ಯ ಸರ್ಕಾರವು ಚುನಾವಣೆ ಪೂರ್ವ ಜನರಿಗೆ ನೀಡಿದಂತಹ ಎಲ್ಲ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ. ಬಡ ಜನರ ಅಭಿವೃದ್ಧಿಗಾಗಿ ಸರ್ಕಾರ ಮಹತ್ತರವಾದ ಕಾರ್ಯ ಮಾಡುತ್ತಿದೆ ಎಂದು ಶಾಸಕ ಬಿ.ಆರ್.ಯಾವಗಲ್ಲ ಹೇಳಿದರು. ತಾಲ್ಲೂಕಿನ ಕೌಜಗೇರಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಸರ್ಕಾರವು ರೈತರ ಸಾಲ ಮನ್ನ್ನಾ ಮಾಡುವ ಮೂಲಕ ಅನ್ನದಾತರ ಕಷ್ಟವನ್ನು ದೂರ ಮಾಡಿದೆ. ಗ್ರಾಮೀಣ ಭಾಗದ ಜನರಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದರು.

ತಾಲ್ಲೂಕು ಪಂಚಾಯ್ತಿ ಸದಸ್ಯೆ ಹೇಮಾವತಿ ಕಡದಳ್ಳಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಚಲುವಾದಿ, ಸೋಮು ಸಜ್ಜನ, ಪಿ.ಎಸ್.ಅವದಕ್ಕನವರ, ಆರ್.ಎಸ್.ಪಾಟೀಲ, ಎಸ್.ಜಿ.ಕಲಹಾಳ, ಹನುಮಂತಗೌಡ ಮಲ್ಕಿಪಾಟೀಲ, ಯಲ್ಲಪ್ಪ ಚೋಳಣ್ಣವರ, ಸುರೇಶಗೌಡ ಪಾಟೀಲ, ಉಮೇಶ ಚವಡಿ, ತಿಪ್ಪಣ್ಣಗೌಡ ಆಡೂರ ಶರಣಪ್ಪ ಚಟ್ರಿ, ಐ.ಜಿ.ಸಾಲಮನಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.