ADVERTISEMENT

ಶಿಗ್ಲಿ ಸೇವಾ ಮಂದಿರದ ಹಿಂಭಾಗದಲ್ಲಿ ಚರಂಡಿ ನೀರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 9:46 IST
Last Updated 16 ನವೆಂಬರ್ 2017, 9:46 IST

ಲಕ್ಷ್ಮೇಶ್ವರ: ಸಮೀಪದ ಶಿಗ್ಲಿಯ ಸೇವಾ ಮಂದಿರದ ಹಿಂಭಾಗದಲ್ಲಿ ಚರಂಡಿ ನೀರು ನಿಂತಿರುವುದರಿಂದ ಇಲ್ಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

ಸೇವಾ ಮಂದಿರ ವಿಜಯಪುರ ಜ್ಞಾನ ಯೋಗಾಶ್ರಮದ ಶಾಖಾ ಕೇಂದ್ರವಾಗಿದೆ. ಇಲ್ಲಿಗೆ ಸಿದ್ಧೇಶ್ವರ ಸ್ವಾಮೀಜಿ ಹಲವು ಬಂದು ಹೋಗಿದ್ದಾರೆ. ಈ ಗಲೀಜು ವಾತಾವರಣ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸೇವಾ ಮಂದಿರ ಶಿಗ್ಲಿಯಿಂದ ಒಡೆಯರಮಲ್ಲಾಪುರ ಗ್ರಾಮ ಮಾರ್ಗದ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡದ ಕಾರಣ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಲೀಜು ನೀರು ನಿಂತಿದೆ. ಸೇವಾ ಮಂದಿರದ ಹತ್ತಿರಕ್ಕೆ ಬಂದರೆ, ಮೂಗುಮುಚ್ಚಿಕೊಂಡು ಹೋಗುವಂತಾಗಿದೆ. ಕೂಡಲೇ ಸೇವಾ ಮಂದಿರದ ಪ್ರದೇಶದಲ್ಲಿ ಚರಂಡಿ ನಿರ್ಮಾಣ ಮಾಡಬೇಕು.
ಮಲ್ಲೇಶಪ್ಪ ನಾರಾಯಣಪುರ, ಶಿಗ್ಲಿ ಗ್ರಾಮದ ನಿವಾಸಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.