ಹಾಸನ: ನಟ ಉಪೇಂದ್ರ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರು ರಾಜಕೀಯದಲ್ಲಿ ಯಶಸ್ಸು ಕಾಣುವುದಿಲ್ಲ ಎಂದು ಪಶು ಸಂಗೋಪನೆ ಸಚಿವ ಎ.ಮಂಜು ಅಭಿಪ್ರಾಯಪಟ್ಟರು.
‘ಉಪೇಂದ್ರ ಪಕ್ಷ ಹುಟ್ಟು ಹಾಕಿರುವುದರಿಂದ ಜನರು ಮತ್ತು ರಾಜ್ಯ ರಾಜಕೀಯದ ಮೇಲೆ ಪರಿಣಾಮ ಬೀರುವುದಿರಲಿ, ಅವರ ಮೇಲೆಯೇ ಪರಿಣಾಮವಾಗದಿದ್ದರೆ ಸಾಕು. ಒಬ್ಬ ನಟನಾಗಿ ಹೊರಹೊಮ್ಮಿದ್ದಾರೆ. ಅವರು ಹಾಗಿದ್ದರೇ ಗೌರವ ಜಾಸ್ತಿ. ಸಿನಿಮಾದಲ್ಲಿ ಬಣ್ಣ ಹಚ್ಚಿಕೊಂಡು ನಟನೆ ಮಾಡುವವರು, ರಾಜಕೀಯದಲ್ಲಿ ನಾಟಕ ಮಾಡಲು ಆಗುವುದಿಲ್ಲ. ಇಲ್ಲಿ ಬಣ್ಣ ಹಚ್ಚದೇ ನಟನೆ ಮಾಡಲು ಹೋದರೆ ಸಿಕ್ಕಿ ಹಾಕಿಕೊಳ್ಳುವುದು ನಿಶ್ಚಿತ. ಇಲ್ಲಿ ಸುಳ್ಳು ಹೇಳಲು ಆಗುವುದಿಲ್ಲ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಜನರಿಗೆ ನಮಸ್ಕಾರ ಮಾಡಿ ನಟರು-ಅಧಿಕಾರಿಗಳಿಗೆ ಅಭ್ಯಾಸವಿಲ್ಲ. ಇಂಥವರು ರಾಜಕೀಯ ಏನೆಂದು ಅರ್ಥ ಮಾಡಿಕೊಳ್ಳುವುದರೊಳಗೆ ಅವಧಿ ಮುಗಿದು ಹೋಗಿರುತ್ತದೆ’ ಎಂದು ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.