ಶ್ರವಣಬೆಳಗೊಳ: ಮಹಾ ಮಸ್ತಕಾಭಿಷೇಕದ ಅಂಗವಾಗಿ ನಡೆಯುತ್ತಿರುವ ಒಳ ಚರಂಡಿ ಮತ್ತು ನೀರು ಸರಬರಾಜು ದುರಸ್ತಿ ಕಾಮಗಾರಿ ವೇಗ ಪಡೆದುಕೊಂಡಿದೆ. ಅಂದಾಜು ₹15 ಕೋಟಿ ವೆಚ್ಚದಲ್ಲಿ 2.5 ಲಕ್ಷ ಲೀಟರ್ ಸಾಮರ್ಥ್ಯದ ಶುದ್ಧ ಜಲ ಸಂಗ್ರಹಗಾರದ ಜೊತೆ ಪಂಪ್ ಹೌಸ್ ನಿರ್ಮಾಣ ಹಾಗೂ ನಾಗಯ್ಯಕೊಪ್ಪಲು ಒಳ ಚರಂಡಿ ಕಾಮಗಾರಿಗಳು ಭರದಿಂದ ಸಾಗಿದೆ.
ಈ ಕಾಮಗಾರಿ ಪೈಕಿ ಬೆಂಗಳೂರು ರಸ್ತೆಯ ಶ್ರೀಕಂಠನಗರ, ಅರಳಿಮರದ ರಸ್ತೆಯ ಮುಂಭಾಗ, ಶ್ರೀಮಠದ ಹಿಂಭಾಗ ಮತ್ತು ಮುಂಭಾಗದ ಒಳಚರಂಡಿಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಹಂತ ತಲುಪಿದೆ.
ಪ್ರಸ್ತುತ ಪಂಪ್ಹೌಸ್ ಇರುವ ಸ್ಥಳದಿಂದ 500 ಮೀಟರ್ ಉದ್ದದವರೆಗಿನ ಮುಖ್ಯ ಪೈಪ್ಗಳನ್ನು ಬದಲಾಯಿಸಿ 200 ಎಂ.ಎಂ. ಅಳತೆಯ ಪೈಪ್ಗಳ ಜೋಡಣಾ ಕಾಮಗಾರಿ ನಡೆಯುತ್ತಿದೆ ಎಂದು ಬೆಂಗಳೂರಿನ ಶುಭಾ ಸೇಲ್ಸ್ ಗುತ್ತಿಗೆದಾರ ಕಂಪೆನಿಯ ಬಾಲಾಜಿ ಶ್ರೀನಿವಾಸ್ ತಿಳಿಸಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.