ADVERTISEMENT

ದೇವೇಗೌಡರ ಹೇಳಿಕೆಗೆ ವೀರಶೈವ ಮಹಾಸಭಾ ಬೆಂಬಲ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 10:23 IST
Last Updated 17 ಮಾರ್ಚ್ 2018, 10:23 IST

ಹಾಸನ : ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವ ಕೆಲಸಕ್ಕೆ ರಾಜ್ಯ ಸರ್ಕಾರ ಹೊರಟಿರುವುದು ಸರಿಯಲ್ಲ ಎಂಬ ಸಂಸದ ಎಚ್.ಡಿ. ದೇವೇಗೌಡ ಹೇಳಿರುವುದು ಸ್ವಾಗತಾರ್ಹ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ ಘಟಕ ತಿಳಿಸಿದೆ.

ವಿಧಾನಸಭಾ ಸದಸ್ಯ ಬಸವರಾಜ್ ಹೊರಟ್ಟಿ ಅವರು ಕಾಂಗ್ರೆಸ್‌ ಸರ್ಕಾರದ ಕೆಲವು ಮಂತ್ರಿಗಳೊಂದಿಗೆ ಕೈಜೋಡಿಸಿ ವೀರಶೈವ ಲಿಂಗಾಯಿತ ಧರ್ಮವನ್ನು ಒಡೆಯಲು ಭಾಗಿಯಾಗಿರುವುದು ಎಷ್ಟು ಸಂಮಜಸ ಎಂದು ಪ್ರಶ್ನಿಸಿದರು.

ಬೇಲೂರು ಕ್ಷೇತ್ರಕ್ಕೆ ಜೆಡಿಸ್ ನಿಂದ ವೀರಶೈವ ಲಿಂಗಾಯತ ಮುಖಂಡರೊಬ್ಬರಿಗೆ ಟಿಕೆಟ್‌ ನೀಡಿರುವುದು ಸ್ವಾಗತಾರ್ಹ. ಇದೆ ರೀತಿ ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೂ ವೀರಶೈವ ಲಿಂಗಾಯಿತ ಮುಖಂಡರಿಗೆ ಟಿಕೆಟ್ ನೀಡುವಂತೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಯಾ ಶಿವಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.