ಚಿಂಚೋಳಿ: ‘ನನ್ನನ್ನು ಚುನಾವಣೆಯಲ್ಲಿ ಸೋಲಿಸುವ ಶಕ್ತಿ ಇನ್ನೂ ಹುಟ್ಟಿಲ್ಲ. ಆದರೆ, ನನ್ನ ಮೈ ತುಂಬಾ ವೈರಿಗಳೇ ತುಂಬಿದ್ದಾರೆ’ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರು ತಿಳಿಸಿದರು.
ರಾಣಾಪುರದಲ್ಲಿ ಬಹಿರಂಗ ಸಭೆಯಲ್ಲಿ ಭಾನುವಾರ ಮಾತನಾಡಿದ ಅವರು, ‘ನನ್ನ ವೈರಿಗಳು ನನಗೆ ಟಿಕೆಟ್ ಸಿಗಬಾರ್ದು ಎಂದು ಪ್ರಯತ್ನಿಸಿದರು. ತಪ್ಪಿಸಲಾಗಲಿಲ್ಲ. ಟಿಕೆಟ್ ಸಿಕ್ಕಿತು. ಗೆಲ್ಲಬಾರ್ದು ಎಂದರು. ಜನರು ಗೆಲ್ಲಿಸಿದರು. ಗೆದ್ದ ಮೇಲೆ ಮಂತ್ರಿ ಆಗಬಾರ್ದು ಎಂದು ಪ್ರಯತ್ನಿಸಿದರು. ಅದು ಫಲ ಸಿಗಲಿಲ್ಲ’ ಎಂದರು.
‘ದಿವಂಗತ ವಿಠಲ್ ಹೇರೂರು ಅವರು ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವ ರಥವನ್ನು ನನ್ನ ಹೆಗಲಿಗೆ ಏರಿಸಿ ಅಗಲಿದ್ದಾರೆ. ನಾನು, ನನ್ನ ಪತ್ನಿಗೆ ಕೋಲಿ ಸಮಾಜವೇ ಸರ್ವಸ್ವ. ನಾವಿಬ್ಬರೂ ದೀಪ ತನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡುವಂತೆ ನಮ್ಮನ್ನು ನಾವು ಸುಟ್ಟುಕೊಂಡು ಕೊಲಿ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದೇವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.