ADVERTISEMENT

ವೃದ್ಧ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 8:54 IST
Last Updated 24 ಸೆಪ್ಟೆಂಬರ್ 2017, 8:54 IST

ಸೋಮವಾರಪೇಟೆ: ಹೆಜ್ಜೇನು ದಾಳಿಗೊಳಗಾದ ಪರಿಣಾಮ ವೃದ್ಧರೊಬ್ಬರು ಒಳಗೊಂಡಂತೆ ನಾಲ್ಕು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ಕರ್ಕಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆಂಚಮ್ಮನಬಾಣೆ ನಿವಾಸಿ ರಾಮೇಗೌಡ (70) ತೀವ್ರ ದಾಳಿಗೊಳಗಾಗಿದ್ದು, ಅಸ್ವಸ್ಥರಾಗಿದ್ದಾರೆ. ವಿದ್ಯಾರ್ಥಿಗಳಾದ ರಿತೇಶ್, ಮುಕ್ತಾಶೆಟ್ಟಿ, ವಿಕೇಶ್ ಶೆಟ್ಟಿ, ವಿಕಾಸ್‌ಶೆಟ್ಟಿ ಗಾಯಗೊಂಡವರು.

ಸಂಜೆ 3.30ರ ಸಮಯದಲ್ಲಿ ವಿದ್ಯಾರ್ಥಿಗಳು ಪಟ್ಟಣಕ್ಕೆ ಮನೆಪಾಠಕ್ಕೆ ತೆರಳುತ್ತಿದ್ದ ಸಂದರ್ಭ ಕರ್ಕಳ್ಳಿ ಗ್ರಾಮದ ಆಲದ ಮರದ ಹತ್ತಿರ ಘಟನೆ ನಡೆದಿದೆ.

ADVERTISEMENT

ಜೇನ್ನೊಣಗಳು ದಾಳಿ ಮಾಡಿದ ಸಂದರ್ಭ ವಿದ್ಯಾರ್ಥಿಗಳು ಸೈಕಲ್ ಮತ್ತು ಬ್ಯಾಗ್‌ಗಳನ್ನು ಸ್ಥಳದಲ್ಲೇ ಬಿಟ್ಟು ಓಡಿದ್ದಾರೆ. ಅದೇ ದಾರಿಯಲ್ಲಿ ತೆರಳುತ್ತಿದ್ದ ರಾಮೇಗೌಡ ಅವರಿಗೂ ಕಚ್ಚಿವೆ. ಉರಿ ತಾಳಲಾರದೆ ನೆಲ್ಲಕ್ಕುರುಳಿದ ಸಂದರ್ಭ ಜೇನ್ನೊಣಗಳು ದಾಳಿ ಮಾಡಿವೆ.

ಸ್ಥಳಕ್ಕೆ ಆಗ್ನಿಶಾಮಕದಳದ ಸಿಬ್ಬಂದಿ ತೆರಳಿ ಗಾಯಾಳುಗಳನ್ನು ರಕ್ಷಿಸಿ, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಮೇಗೌಡ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.