ADVERTISEMENT

‘ಎಲ್ಲ ಸಮಾಜದೊಂದಿಗೆ ಸೌಹಾರ್ದ ಅಗತ್ಯ’

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 10:37 IST
Last Updated 25 ಜುಲೈ 2017, 10:37 IST

ಗಂಗಾವತಿ: ‘ಸಮಾಜದಲ್ಲಿ ಎಷ್ಟೇ ಉನ್ನತವಾಗಿದ್ದರೂ ಒಂದು ಸಮಾಜವು ತನ್ನ ಏಳ್ಗೆಗೆ ಮತ್ತೊಂದು ಸಮಾಜದ ಸಹಕಾರ ಅಗತ್ಯವಾಗಿ ಪಡೆಯಬೇಕಿರುತ್ತದೆ’ ಎಂದು ಶಾಸಕ ಶಿವರಾಜ ತಂಗಡಗಿ ಹೇಳಿದರು.

ತಾಲ್ಲೂಕಿನ ಹಣವಾಳ ಗ್ರಾಮದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಯುವಕರು ಆಯೋಜಿಸಿದ್ದ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಂದು ಸಮಾಜವು ಸಂಘಟನೆಯ ಜೊತೆಗೆ ಮತ್ತೊಂದು ಸಮಾಜದ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು’ ಎಂದು ಹೇಳಿದರು.

ADVERTISEMENT

‘ಗ್ರಾಮದ ಹಲವು ಯುವಕರು ವೃತ್ತ ನಿರ್ಮಾಣದ ಬೇಡಿಕೆ ಇಟ್ಟಿದ್ದಾರೆ. ಕಾನೂನು ಬದ್ಧವಾಗಿ ವೃತ್ತ ನಿರ್ಮಾಣ ಮಾಡಿದರೆ ಹೇಮರಡ್ಡಿ ಮಲ್ಲಮ್ಮ ಅಥವಾ ಕಿತ್ತೂರು ರಾಣಿ ಚನ್ನಮ್ಮ ಅವರ ಪುತ್ಥಳಿ ನಿರ್ಮಾಣಕ್ಕೆ ವೈಯಕ್ತಿಕ ದೇಣಿಗೆ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಮರೇಶ ಗೋನಾಳ, ತಾಲ್ಲೂಕು ಪಂಚಾಯಿತಿ ಸದಸ್ಯ ಶಂಭಣ್ಣ ಅಳ್ಳಳ್ಳಿ, ಪಂಚಮಸಾಲಿ ಸಮಾಜದ ಮುಖಂಡರಾದ ಕಂಪ್ಲಿ ಬಸಪ್ಪ, ವಕೀಲ ವಿ.ಎನ್. ಪಾಟೀಲ, ಕಳಕನಗೌಡ ಜಮಾಪೂರ, ಸಿದ್ದನಗೌಡ ಹೊಸಗೌಡ್ರು, ಶಶಿಧರಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.