ತಿ.ನರಸೀಪುರ: ಗುರುಗ್ರಹ ತುಲಾರಾಶಿಗೆ ಪ್ರವೇಶ ಮಾಡಿದ ಅಂಗವಾಗಿ ಪಟ್ಟಣದ ವಾಸವಿ ಮಹಲ್ ನಲ್ಲಿ 12 ದಿನಗಳ ಕಾವೇರಿ ನದಿ ಪುಷ್ಕರ ಮಹೋತ್ಸವ ಆರಂಭಗೊಂಡಿದ್ದು ಸೆ.23ರವರೆಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಭಜನೆ, ಹೋಮ ನಡೆಯುತ್ತಿವೆ. ವಿಜಯವಾಡ, ವಿಶಾಖಪಟ್ಟಣ, ಬೆಂಗಳೂರು, ರಾಜಮಂಡ್ರಿ, ಪೆನುಗೊಂಡಗಳಿಂದ ಭಕ್ತರು ಬರುತ್ತಿದ್ದಾರೆ.
ಹೇಮಸಾಯಿರಾಮ ಅನ್ನಪೂರ್ಣ ಚಾರಿಟಬಲ್ ಟ್ರಸ್ಟ್, ವಿಜಯವಾಡ, ಶಿರಿಡಿ ವಾರಣಾಸಿ ನಿತ್ಯಾನ್ನ ಛತ್ರ, ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಬೆಂಗಳೂರು, ವಾಸವಿ ಅನ್ನದಾನ ಸೇವಾ ಟ್ರಸ್ಟ್ ವಿಕ್ಟೋರಿಯಾ ಆಸ್ಪತ್ರೆ ಬೆಂಗಳೂರು, ಆರ್ಯವೈಶ್ಯ ಮಂಡಳಿ ಒಕ್ಕೂಟ ಬೆಂಗಳೂರು, ಅರ್ಯವೈಶ್ಯ ಮಂಡಳಿ, ವಾಸವಿ ಸೇವಾ ಟ್ರಸ್ಟ್, ವಾಸವಿ ಯುವ ಜನ ಸಂಘ ತಿ.ನರಸೀಪುರ ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.