ADVERTISEMENT

ಕಸ್ತೂರಿರಂಗನ್‌ ವರದಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:12 IST
Last Updated 19 ಮೇ 2017, 5:12 IST
ಕಸ್ತೂರಿರಂಗನ್‌ ವರದಿ ವಿರೋಧಿಸಿ ತಾಲ್ಲೂಕು ಜೆಡಿಎಸ್‌ ಕಾರ್ಯಕರ್ತರು ಆಗುಂಬೆಯಿಂದ ತೀರ್ಥಹಳ್ಳಿಯವರೆಗೆ ಬೈಕ್‌ ರ್‍್ಯಾಲಿ ನಡೆಸಿದರು.
ಕಸ್ತೂರಿರಂಗನ್‌ ವರದಿ ವಿರೋಧಿಸಿ ತಾಲ್ಲೂಕು ಜೆಡಿಎಸ್‌ ಕಾರ್ಯಕರ್ತರು ಆಗುಂಬೆಯಿಂದ ತೀರ್ಥಹಳ್ಳಿಯವರೆಗೆ ಬೈಕ್‌ ರ್‍್ಯಾಲಿ ನಡೆಸಿದರು.   

ತೀರ್ಥಹಳ್ಳಿ:  ಕಸ್ತೂರಿರಂಗನ್‌ ವರದಿ ಕೈಬಿಡುವಂತೆ ಆಗ್ರಹಿಸಿ ತಾಲ್ಲೂಕು ಜೆಡಿಎಸ್‌ ಕಾರ್ಯಕರ್ತರು ಗುರುವಾರ ತಾಲ್ಲೂಕಿನ ಆಗುಂಬೆಯಿಂದ ತೀರ್ಥಹಳ್ಳಿಯವರೆಗೆ ಬೈಕ್‌  ರ್‍್ಯಾಲಿ ನಡೆಸಿದರು. ನಂತರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಬೈಕ್‌ ಸವಾರರು ನಾಲೂರು, ಗುಡ್ಡೇಕೇರಿ, ಮೇಗರವಳ್ಳಿ ಮೂಲಕ ತೀರ್ಥಹಳ್ಳಿ ಪಟ್ಟಣದ ಆಜಾದ್‌ ರಸ್ತೆಯಲ್ಲಿ ಸಾಗಿ ತಾಲ್ಲೂಕು ಕಚೇರಿ ಎದರು ಸಮಾವೇಶಗೊಂಡರು.
ಸಭೆಯಲ್ಲಿ ಮಾತನಾಡಿದ ಜೆಡಿಎಸ್‌  ತಾಲ್ಲೂಕು ಘಟಕದ ಅಧ್ಯಕ್ಷ ಆರ್‌.ಮದನ್‌,  ‘ಕಸ್ತೂರಿರಂಗನ್ ವರದಿ ಜಾರಿಯಿಂದ ಮಲೆನಾಡು ಭಾಗದ ರೈತರಿಗೆ ಸಮಸ್ಯೆ ಉಂಟಾಗಲಿದೆ. ವರದಿ ಯನ್ನು ಮರು ಪರಿಶೀಲನೆಗೆ ಒಳಪಡಿಸ ಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಎಂ.ಶ್ರೀಕಾಂತ್‌ ಮಾತನಾಡಿ,  ರಾಜ್ಯದಲ್ಲಿ ಮತ್ತೆ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದರು. ಪಕ್ಷದ ಕಾರ್ಯಾಧ್ಯಕ್ಷ ಕುಣಜೆ ಕಿರಣ್‌ ಪ್ರಭಾಕರ್‌ ಮಾತನಾಡಿ, ‘ಶಾಸಕ ಕಿಮ್ಮನೆ ರತ್ನಾಕರ, ಮಾಜಿ ಶಾಸಕ ಆರಗ ಜ್ಞಾನೇಂದ್ರ  ಪದೇ ಪದೇ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದೇವೆ ಎಂದು ಹೇಳುತ್ತಾ ಜನರನ್ನು ವಂಚಿಸುತ್ತಿದ್ದಾರೆ. ರೈತರ ಸಮಸ್ಯೆಗಳು ಹಾಗೆಯೇ ಉಳಿದಿವೆ’ ಎಂದು ದೂರಿದರು.

ADVERTISEMENT

ಮುಖಂಡರಾದ ಎ.ಪಿ.ರಾಮಪ್ಪ, ಹೆದ್ದೂರು ನಟರಾಜ್‌, ಮಹಿಳಾ ಘಟಕದ ಅಧ್ಯಕ್ಷೆ ವಿನಂತಿ ಎಸ್‌.ಕರ್ಕಿ, ಯುವ ಘಟಕದ ಅಧ್ಯಕ್ಷ ಯಡೂರು ಸುರೇಂದ್ರ, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ, ಯುವ ಘಟಕದ ಕಾರ್ಯಾಧ್ಯಕ್ಷ ದೀಪಕ್‌ ಚಿಕ್ಕಳೂರು, ಮುಖಂಡರಾದ ಈರೇಗೋಡು ಮೋಹನ್‌,  ಜ್ಯೋತಿ ಮೋಹನ್‌, ಶೈಲಾ ನಾಗರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.