ADVERTISEMENT

ಶಿವಮೊಗ್ಗ: ಚಿನ್ನದ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 8:32 IST
Last Updated 21 ಡಿಸೆಂಬರ್ 2017, 8:32 IST
ಶಿವಮೊಗ್ಗ: ಚಿನ್ನದ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ
ಶಿವಮೊಗ್ಗ: ಚಿನ್ನದ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ   

ಶಿವಮೊಗ್ಗ: ಆಟೊದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಚಿನ್ನಾಭರಣವನ್ನು ಪೊಲೀಸರ ನೆರವಿನಿಂದ ವಾರಸುದಾರರಿಗೆ ತಲುಪಿಸುವ ಮೂಲಕ ಮಹಿಳೆ ಪ್ರಾಮಾಣಿಕತೆ ಮೆರೆದಿದ್ದಾರೆ.

ಆಟೊದಲ್ಲಿ ಪ್ರಯಾಣಿಸುತ್ತಿದ್ದ ಸಮೀನಾಬಾನು 55 ಗ್ರಾಂ ಚಿನ್ನದ ಸರವನ್ನು ಮರೆತು ಹೋಗಿದ್ದರು. ಅದೇ ಆಟೊದಲ್ಲಿ ಪ್ರಯಾಣಿಸುತ್ತಿದ್ದ ಆಶಾ, ಸರವನ್ನು ಗಮನಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಲುಪಿಸಿದ್ದರು.

ತುಂಗಾನಗರ ಠಾಣೆ ಪೊಲೀಸರು ಸರ ಕಳೆದುಕೊಂಡಿದ್ದ ಸಮೀನಾಬಾನು ಅವರನ್ನು ಪತ್ತೆ ಹಚ್ಚಿ ಆಶಾ ಅವರ ಮೂಲಕ ತಲುಪಿಸಿದ್ದಾರೆ. ಆಶಾ ಅವರ ಪ್ರಾಮಾಣಿಕತೆಗೆ ಮತ್ತು ಪೊಲೀಸರ ಸಹಕಾರಕ್ಕೆ ಸಮೀನಾಬಾನು ಕೃತಜ್ಞತೆ ಸಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.