ಮಧುಗಿರಿ: ‘ಕೆಲವು ಮುಖಂಡರ ಪಿತೂರಿಯಿಂದ ಎಸ್.ಎಂ.ಕೃಷ್ಣ ಅವರು 2004ರಲ್ಲಿ ನನ್ನನ್ನು ಪಕ್ಷದಿಂದ ಹೊರ ಹಾಕಿದರು. ಪಿತೂರಿ ನಡೆಸಿದವರನ್ನು ಮಾತ್ರ ನಾನು ಕಾಂಗ್ರೆಸ್ ಕಳ್ಳರು ಎಂದಿದ್ದೇನೆ. ಆದರೆ ಈಗ ಅವರು ಪಕ್ಷದಲ್ಲಿ ಇಲ್ಲ. ಇಂದಿನ ಕಾಂಗ್ರೆಸ್, ಕಳ್ಳರಿಂದ ಮುಕ್ತವಾದ ಪಕ್ಷ’ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ತಾಡಿ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ನಡಿಗೆ ಮನೆ ಮನೆ ಬಳಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ಮಗನ ಗೆಲುವಿಗೆ ತುಮಕೂರು ಜಿಲ್ಲೆಯ ಕೆಲವು ಮುಖಂಡರು ಕತ್ತರಿ ಹಾಕಿದರು. ನಾನು ಎಂದಿಗೂ ಇಂತಹ ರಾಜಕಾರಣ ಮಾಡಿಲ್ಲ’ ಎಂದು ಹೆಸರು ಹೇಳದೆಯೇ ಸ್ವಪಕ್ಷೀಯ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಯಾವುದೇ ಕಾರಣಕ್ಕೂ ಪಕ್ಷವನ್ನು ತ್ಯಜಿಸುವುದಿಲ್ಲ. ನನ್ನ ಮನೆಯವರ ಜತೆ ನಾನು ಕಿತ್ತಾಡುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.