ADVERTISEMENT

ಮೊಬೈಲ್ ಬಳಕೆ ಎಚ್ಚರವಿರಲಿ

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:12 IST
Last Updated 19 ಮೇ 2017, 5:12 IST
ಕಾರ್ಯಕ್ರಮವನ್ನು ಡಾ. ಎಸ್. ಬಸವರಾಜಪ್ಪ ಉದ್ಘಾಟಿಸಿದರು. ಡಾ. ಟಿ. ರಂಗಸ್ವಾಮಿ, ಡಾ. ನಂದೀಶಯ್ಯ, ಡಾ. ಎಂ. ಪ್ರಸನ್ನಕುಮಾರ್, ಡಾ. ಜಿ.ಎಸ್. ಶಿವಕುಮಾರ್ ಇದ್ದರು
ಕಾರ್ಯಕ್ರಮವನ್ನು ಡಾ. ಎಸ್. ಬಸವರಾಜಪ್ಪ ಉದ್ಘಾಟಿಸಿದರು. ಡಾ. ಟಿ. ರಂಗಸ್ವಾಮಿ, ಡಾ. ನಂದೀಶಯ್ಯ, ಡಾ. ಎಂ. ಪ್ರಸನ್ನಕುಮಾರ್, ಡಾ. ಜಿ.ಎಸ್. ಶಿವಕುಮಾರ್ ಇದ್ದರು   

ತಿಪಟೂರು: ‘ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ 42 ಕೋಟಿ ವಿದ್ಯಾರ್ಥಿಗಳಿದ್ದು, ಇದರಲ್ಲಿ ಹೆಚ್ಚಿನವರು ಅನಗತ್ಯವಾಗಿ ಮೊಬೈಲ್ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಧಾರವಾಡ ಐಐಐಟಿ ರಿಜಿಸ್ಟ್ರಾರ್ ಡಾ. ಎಸ್. ಬಸವರಾಜಪ್ಪ ತಿಳಿಸಿದರು.

ನಗರದ ಕಲ್ಪತರು ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಗುರುವಾರ ನಡೆದ ಮೆಕ್‍ಮೆಸ್ಟಿಕ್ 2ಕೆ17 ಮೂರನೇ ರಾಷ್ಟ್ರೀಯ ಸಮಾವೇಶ ಮತ್ತು ಸೌತ್ ಇಂಡಿಯಾ ಪ್ರಾಜೆಕ್ಟ್ ಎಕ್ಸಿಬಿಷನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾತ್ರಿ 11ರಿಂದ ಬೆಳಿಗ್ಗೆ 3ರವರೆಗೆ ವಿದ್ಯಾರ್ಥಿಗಳು ಮೊಬೈಲ್ ಮೂಲಕ ಅಂತರ್‌ಜಾಲದಲ್ಲಿ ಮುಳುಗುವುದರಿಂದ ವಿಶ್ರಾಂತಿ ಇಲ್ಲದೆ,  ಒತ್ತಡಕ್ಕೆ ಒಳಗಾಗುತ್ತಾರೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ವಿದ್ಯಾರ್ಥಿಗಳು ಇದರಿಂದ ಹೊರಬಂದು ಏಕಾಗ್ರತೆ ಸಿದ್ಧಿಸಿಕೊಂಡು ಜ್ಞಾನ ಸಂಪಾದನೆಗೆ ಒತ್ತು ನೀಡಬೇಕು. ವಿದ್ಯಾರ್ಥಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ದಾವಣಗೆರೆ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಡಾ. ಎಂ. ಪ್ರಸನ್ನಕುಮಾರ್, ‘ವಿದ್ಯಾರ್ಥಿಗಳು ಉನ್ನತ ಮಟ್ಟದ ವ್ಯಾಸಂಗಕ್ಕಾಗಿ ಆಸಕ್ತಿ ತೋರಬೇಕು. ಹೆಚ್ಚು ಅಧ್ಯಯನ ಮತ್ತು ಸಂಶೋಧನಾ ಪ್ರಬಂಧಗಳನ್ನು ಮಂಡಿಸುವ ಕಲೆ ಕರಗತವಾಗಬೇಕು. ಇದಕ್ಕೆ ನುರಿತ ಉಪನ್ಯಾಸಕರು ಮತ್ತು ಪ್ರಯೋಗಾಲಯವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಮಾದರಿ ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಸತ್ಪ್ರಜೆಗಳಾಗಿ ರೂಪಗೊಳ್ಳಬೇಕು’ ಎಂದರು.

ಎಸ್‍ಐಟಿಯ ಡಾ. ಜಿ.ಎಸ್. ಶಿವಕುಮಾರ್, ‘ಕಾಲೇಜಿನಲ್ಲಿರುವ ಸಕಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿ ಮಾದರಿ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕು’ ಎಂದು ಅವರು ಹೇಳಿದರು.

ಹಾಸನದ ಜಿಇಒ ಕಾಲೇಜಿನ ಡಾ. ಟಿ. ರಂಗಸ್ವಾಮಿ, ಪ್ರಾಂಶುಪಾಲ ಡಾ. ನಂದೀಶಯ್ಯ ಮಾತನಾಡಿದರು. ಕಲ್ಪತರು ವಿದ್ಯಾಸಂಸ್ಥೆ ಖಜಾಂಚಿ ಟಿ.ಎಸ್. ಶಿವಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೆಕ್ಯಾನಿಕಲ್ ವಿಭಾಗದ ಡಾ. ಬಿ.ಎಂ. ವಿಶ್ವನಾಥ್ ಸ್ವಾಗತಿಸಿದರು. ಡಾ. ಟಿ.ಎಸ್. ಕಿರಣ್ ವಂದಿಸಿದರು. ಟಿ.ಎನ್. ಪರಮಶಿವಯ್ಯ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.