ADVERTISEMENT

ಪಡುಕರೆ: ಹಾಲು ಉತ್ಪಾದಕರ ಸಂಘ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 9:04 IST
Last Updated 30 ಆಗಸ್ಟ್ 2017, 9:04 IST

ಕೋಟ(ಬ್ರಹ್ಮಾವರ): ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ ಈಚೆಗೆ ಸಂಘದ ಅಧ್ಯಕ್ಷ ಕೆ. ಶಿವಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕೋಟತಟ್ಟು ಪಡುಕರೆಯಲ್ಲಿ ನಡೆಯಿತು.

ಒಕ್ಕೂಟದ ಉಪವ್ಯವಸ್ಥಾಪಕ ಡಾ.ಮನೋಹರ್ ಕೆ ಹಾಗೂ ವಿಸ್ತರಣಾಧಿಕಾರಿ ಸರಸ್ವತಿ ಸಂಘದಿಂದ ಸದಸ್ಯರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
‘ಹೆಚ್ಚು ಹಾಲು ಪೂರೈಕೆ ಮಾಡಿದ ಹಾಗೂ ವರ್ಷದ ಎಲ್ಲ ದಿನ ಹಾಲು ಪೂರೈಕೆ ಮಾಡಿದ ಸದಸ್ಯರನ್ನು ಗೌರವಿಸಲಾಯಿತು. ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವಂತೆ ಅಧ್ಯಕ್ಷರು ವಿನಂತಿಸಿದರು.

ಸಂಘದ ಆಡಳಿತ ನಿರ್ದೇಶಕ ಕೆ.ಶಿವಾನಂದ ಐತಾಳ, ಎಂ.ಭಾಸ್ಕರ್ ಶೆಟ್ಟಿ, ಎಂ.ಜಯರಾಮ್ ಶೆಟ್ಟಿ, ಕೆ. ಶಂಕರ್ ಗಾಣಿಗ, ಎಂ.ಕೃಷ್ಣ ಹಂದೆ, ಗಾಯತ್ರಿ ಆರ್.ಹಂದೆ, ಅಕ್ಕಮ್ಮ, ಎಚ್.ಪ್ರಭಾವತಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.