ADVERTISEMENT

ವೀರವಿಠಲ ದೇವರಿಗೆ ಶತಕಲಶಾಭಿಷೇಕ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 9:41 IST
Last Updated 18 ನವೆಂಬರ್ 2017, 9:41 IST

ಉಡುಪಿ: ಭದ್ರಗಿರಿ ವೀರ ವಿಠಲ ದೇವಸ್ಥಾನದಲ್ಲಿ ಗುರುವಾರ ಕಾಶೀಮಠದ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ವೀರ ವಿಠಲ ದೇವರಿಗೆ ಶತಕಲಶಾಭಿಷೇಕ ನೆರವೇರಿಸಿದರು.

ಶತಕಲಶಾಭಿಷೇಕದ ಧಾರ್ಮಿಕ ಪೂಜಾ ವಿಧಾನಗಳನ್ನು ಕಾಶೀನಾಥ್ ಭಟ್, ಜಯದೇವ ಭಟ್, ಮಹೇಶ್ ಭಟ್, ಗಣೇಶ್ ಭಟ್, ಸಂದೇಶ್ ಭಟ್ ನಡೆಸಿದರು. ಜಿ.ಎಸ್. ಬಿ. ಮಹಿಳಾ ಮಂಡಳಿಯ ಸದಸ್ಯರಿಂದ ವಿಶೇಷ ಭಜನೆ, ಸ್ತೋತ್ರ ಪಠಣ ನಡೆಯಿತು. ಸಾವಿರಾರು ಭಕ್ತರು ಸಮಾರಂಭದಲ್ಲಿ ಪಾಲ್ಗೊಂಡರು.

ಮಂಜುನಾಥ ಪಿ. ನಾಯಕ್, ಪಾಂಡುರಂಗ ಆಚಾರ್ಯ, ಸರ್ವೋತ್ತಮ ಪೈ, ಸತೀಶ್ ಕಿಣಿ, ಚಂದ್ರಕಾಂತ್ ಪ್ರಭು, ದೇವದಾಸ್ ಪೈ, ದಿನೇಶ್ ಪಡಿಯಾರ್, ಜಗದೀಶ್ ಪೈ, ರಾಧಾ ಜಿ. ಕಾಮತ್, ಅಂಜನಿ ಎಂ. ಶೆಣೈ, ಶಾಂಭವಿ ಕಾಮತ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.