ADVERTISEMENT

ಹೊಸ ನಿರೀಕ್ಷೆಯಲ್ಲಿ ಜನತೆ

ಪಿ.ಕೆ.ರವಿಕುಮಾರ
Published 15 ಮಾರ್ಚ್ 2017, 6:54 IST
Last Updated 15 ಮಾರ್ಚ್ 2017, 6:54 IST
ಹೊಸ ನಿರೀಕ್ಷೆಯಲ್ಲಿ ಜನತೆ
ಹೊಸ ನಿರೀಕ್ಷೆಯಲ್ಲಿ ಜನತೆ   

ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ತನ್ನ ಆಡಳಿತಾವಧಿಯ ಕಡೆಯ ಬಜೆಟನ್ನು ಬುಧವಾರ ಮಂಡಿಸಲಿದ್ದು, ಉತ್ತರ ಜಿಲ್ಲೆಯ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ. ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿರುವುದರಿಂದ ಈ ಬಾರಿ ಹೆಚ್ಚಿನ ಕೊಡುಗೆಗಳು ಸಿಗಲಿದೆ ಎನ್ನುವ ಆಶಾಭಾವನೆ ಜನರದ್ದಾಗಿದೆ.

ಕೈಗಾರಿಕೆಗಳ ಸ್ಥಾಪನೆ, ದಾಂಡೇಲಿ ತಾಲ್ಲೂಕು ರಚನೆ, ಪ್ರವಾಸೋದ್ಯಮ, ಬಂದರುಗಳ ಅಭಿವೃದ್ಧಿಗೆ ಇನ್ನಷ್ಟು ಅನುದಾನ, ನಗರ ಹಾಗೂ ಪಟ್ಟಣಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಹೀಗೆ ಹಲವಾರು ನಿರೀಕ್ಷೆಗಳಿದ್ದು, ಅವುಗಳ ಎಷ್ಟರ ಮಟ್ಟಿಗೆ ನನಸಾಗಲಿದೆ ಎಂದು ಜಿಲ್ಲೆಯ ಜನತೆ ಕಾತರದಿಂದ ಎದುರು ನೋಡುತ್ತಿದ್ದಾರೆ.

ವಿಶೇಷ ಪ್ಯಾಕೇಜ್‌ ಸಿಗಲಿ: ‘ಜಿಲ್ಲೆಯ ನಗರ ಹಾಗೂ ಪಟ್ಟಣಗಳು ಮೂಲ ಸೌಕರ್ಯದಿಂದ ವಂಚಿತವಾಗಿದ್ದು, ಇವುಗಳ ಅಭಿವೃದ್ಧಿಗಾಗಿ ಸರ್ಕಾರ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು. ಪ್ರವಾಸಿ ತಾಣಗಳನ್ನು ಹೊಂದಿರುವ ಕಾರವಾರ ನಗರದಲ್ಲಿ ಒಳಚರಂಡಿ (ಯುಜಿಡಿ) ವ್ಯವಸ್ಥೆಯೇ ಇಲ್ಲ. ಕೆಲ ವರ್ಷಗಳ ಹಿಂದೆ ಕೆಲ ಭಾಗದಲ್ಲಿ ಮಾಡಿದ ಯುಜಿಡಿ ವ್ಯವಸ್ಥೆಯು ವಿಫಲವಾಗಿದೆ.

ADVERTISEMENT

</p><p>ಸೀಬರ್ಡ್‌ ನೌಕಾನೆಲೆಯ 2ನೇ ಹಂತದ ಯೋಜನೆ ಚಾಲನೆ ಸಿಕ್ಕಿದೆ. ಭವಿಷ್ಯದಲ್ಲಿ ಕಾರವಾರ ದಲ್ಲಿ ಜನಸಂಖ್ಯೆಯ ಗಣನೀಯವಾಗಿ ಏರಿಕೆಯಾಗಲಿದೆ. ಇದನ್ನು ಮನಗಂಡು ನಗರದ ಯುಜಿಡಿ ವ್ಯವಸ್ಥೆಗೆ `100 ಕೋಟಿ ಮೀಸಲಿ ಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರಿಗೂ ಮನವಿ ಮಾಡಿದ್ದೇವೆ’ ಎಂದು ಕ್ರೆಡಾಯ್‌ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ ‘ಪ್ರಜಾವಾಣಿ’ಗೆ ತಿಳಿಸಿದರು.</p><p><strong>ಕೈಗಾರಿಕೆಗಳು ಬರಲಿ: </strong>‘ಜಿಲ್ಲೆಯಲ್ಲಿ ಉದ್ಯೋಗಾವಕಾಶ ಕೊರತೆ ಇದೆ. ಹೀಗಾಗಿ ಇಲ್ಲಿನ ವಿದ್ಯಾವಂತ ಯುವಕರು, ಯುವತಿಯರು ಉದ್ಯೋಗ ವನ್ನು ಅರಸಿ ನೆರೆರಾಜ್ಯ ಗೋವಾ ಹಾಗೂ ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಸ್ಥಳೀಯವಾಗಿ ಕೈಗಾರಿಕೆಗಳು ಸ್ಥಾಪಿಸಬೇಕು’ ಎನ್ನುತ್ತಾರೆ ನಾಟಕಕಾರ ಅನಂತ ಹುಲಸ್ವಾರ.</p><p><iframe allowfullscreen="" frameborder="0" height="315" src="https://www.youtube.com/embed/7b1lelhxdsQ" width="560"/></p><p><strong>ದಾಂಡೇಲಿ ತಾಲ್ಲೂಕು ರಚನೆಗೆ ಬೇಡಿಕೆ: </strong>ದಾಂಡೇಲಿ ತಾಲ್ಲೂಕು ರಚನೆಗೆ ಬಲವಾದ ಕೂಗು ಕೇಳಿಬಂದಿದ್ದು, ದಾಂಡೇಲಿ ತಾಲ್ಲೂಕು ರಚನಾ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಸರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದು ಸುಮಾರು 55 ದಿನಗಳನ್ನು ದಾಟಿದೆ.</p><p>‘ಈ ಬಾರಿಯ ಬಜೆಟ್‌ನಲ್ಲಿ ದಾಂಡೇಲಿ ತಾಲ್ಲೂಕು ಎಂದು ಘೋಷಣೆ ಮಾಡುವ ನಿರೀಕ್ಷೆ ಇದೆ. ಇದರಿಂದ ದಾಂಡೇಲಿಯ ಅಭಿವೃದ್ಧಿ ಹಾಗೂ ಇಲ್ಲಿನ ಜನರಿಗೆ ಹೆಚ್ಚಿನ ಲಾಭ ಆಗಲಿದೆ’ ಎನ್ನುತ್ತಾರೆ ಹೋರಾಟ ಸಮಿತಿಯ ಅಧ್ಯಕ್ಷ ಅಜೀತ ನಾಯಕ.</p><p><iframe allowfullscreen="" frameborder="0" height="315" src="https://www.youtube.com/embed/PsNaqQa5lEo" width="560"/></p><p>***</p><p>ಜಿಲ್ಲೆಯಲ್ಲಿ ಪ್ರವಾಸೋದ್ಯಮ ತಕ್ಕಮಟ್ಟಿಗೆ ಅಭಿವೃದ್ಧಿ ಕಾಣುತ್ತಿದೆ. ಆದರೆ ಮೂಲಸೌಕರ್ಯ ಅಭಿವೃದ್ಧಿಗೆ ಇನ್ನಷ್ಟು ಒತ್ತು ಸಿಗಬೇಕಿದೆ.</p><p><em><strong>-ಕೃಷ್ಣಾನಂದ ಬಾಂದೇಕರ, ಕ್ರೆಡಾಯ್‌ ಜಿಲ್ಲಾ ಘಟಕದ ಅಧ್ಯಕ್ಷ</strong></em></p><p><iframe allowfullscreen="" frameborder="0" height="315" src="https://www.youtube.com/embed/oyHL9zmx8E8" width="560"/></p><p><strong>**</strong></p><p><strong>ಯೋಜನೆಗಳು ಪ್ರಗತಿಯಲ್ಲಿ</strong><br/>&#13; ಕಳೆದ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯ ಕರಾವಳಿ ಭಾಗಕ್ಕೆ ಉತ್ತಮ ಕೊಡುಗೆಗಳು ಸಿಕ್ಕಿತ್ತು. ಆದರೆ ಅವುಗಳಲ್ಲಿ ಕೆಲವು ಪ್ರಗತಿಯಲ್ಲಿದ್ದು, ಇನ್ನೂ ಕೆಲವು ನನೆಗುದಿಗೆ ಬಿದ್ದಿದೆ. ನಿರೀಕ್ಷೆಯಂತೆ ಕಳೆದ ಶೈಕ್ಷಣಿಕ ಸಾಲಿನಿಂದ ವೈದ್ಯಕೀಯ ಕಾಲೇಜು ಆರಂಭವಾಗಿದೆ. ಕಾರವಾರಕ್ಕೆ ಹೊಸ ಕಾರಾಗೃಹ ಘೋಷಣೆಯಾದರೂ ಇನ್ನೂ ಜಾಗ ಗುರುತಿಸುವ ಪ್ರಕ್ರಿಯೆ ಮುಂದುವರಿದಿದ್ದು, ಎಲ್ಲಿ ಸ್ಥಾಪಿಸಬೇಕು ಎನ್ನುವ ಬಗ್ಗೆ ಅಂತಿಮವಾಗಿಲ್ಲ. ತದಡಿ ಮೀನುಗಾರಿಕಾ ಬಂದರು, ಕುಮಟಾದಲ್ಲಿ ಗೋಡಂಬಿ ತಂತ್ರಜ್ಞಾನ ತರಬೇತಿ ಕೇಂದ್ರ ಹಾಗೂ ಕಾರವಾರ ವಾಣಿಜ್ಯ ಬಂದರಿನಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಸ್ವಲ್ಪ ಮಟ್ಟಿನ ಪ್ರಗತಿ ಸಾಧಿಸಿವೆ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.