ADVERTISEMENT

15 ಕೋಣ ಸಾಗಣೆ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:02 IST
Last Updated 15 ಮೇ 2017, 7:02 IST

ಭಟ್ಕಳ: ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ 15 ಕೋಣಗಳನ್ನು ಲಾರಿಯಲ್ಲಿ ಹಿಂಸಾತ್ಮಕವಾಗಿ ಉಡುಪಿ ಜಿಲ್ಲೆಯ ಕಡೆಗೆ ಸಾಗಿಸುತ್ತಿದ್ದಾಗ ಹಿಂದು ಸಂಘಟನೆಗಳ ಸದಸ್ಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ನಡೆದಿದೆ.

ಪ್ರಕರಣಕ್ಕೆ ಸಂಬಂಧಪಟ್ಟ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬೈಲಹೊಂಗಲ ನಿವಾಸಿಗಳಾದ ಆನಂದ ಮಾಗಪ್ಪ ಮರೋಳ್ಳಿ, ಮಲ್ಲನಗೌಡ ರಾಮನಗೌಡ ಮರಿಕೆಂಚ, ಸಿದ್ದಪ್ಪ ಶಿವಪ್ಪ ಎಂದು ಗುರುತಿಸಲಾಗಿದೆ.

ಇವರು ಬೈಲಹೊಂಗಲ ಕಡೆಯಿಂದ ಕಳವು ಮಾಡಿದ 15 ಕೋಣಗಳನ್ನು ಉಡುಪಿಯ ಜಿಲ್ಲೆಯ ಕಡೆಯ ಕಸಾಯಿಖಾನೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ. ಖಚಿತಮಾಹಿತಿ ಮೇರೆಗೆ ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ಕೋಣಗಳನ್ನು ಸಾಗಿಸುತ್ತಿದ್ದ ವಾಹನ ವನ್ನು ಹಿಡಿದು ಆರೋಪಿಗಳ ಸಮೇತ ನಗರಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ರಾಘವೇಂದ್ರ ಆರ್. ನಾಯ್ಕ ದೂರು ನೀಡಿದ್ದಾರೆ. ಪಿಎಸ್ಐ ಅಣ್ಣಪ್ಪ ಮೊಗೇರ ಪ್ರಕರಣದ ತನಿಖೆ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.