ADVERTISEMENT

‘ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 6:05 IST
Last Updated 20 ಡಿಸೆಂಬರ್ 2017, 6:05 IST

ದೇವರಹಿಪ್ಪರಗಿ: ಕೃಷಿ ಕ್ಷೇತ್ರದಲ್ಲಿ ಸುಧಾರಿಸಿದ ತಂತ್ರಜ್ಞಾನವನ್ನು ಬಳಸಿ ಕೊಂಡು ಸ್ವಾವಲಂಬಿಗಳಾಗಬೇಕುಎಂದು ಕೃಷಿ ತಾಂತ್ರಿಕ ಸಂಶೋ ಧಕಿ ಶ್ರೀವಾಣಿ ಕುಲಕರ್ಣಿ ಹೇಳಿದರು.

ಸಮೀಪದ ಹಿಟ್ನಳ್ಳಿ ಗ್ರಾಮದ ರಾಜಶೇಖರ ಮಮಾಣಿ ಇವರ ತೋಟದಲ್ಲಿ ಕೃಷಿ ಇಲಾಖೆ ಹಾಗೂ ಇಕ್ರಿಸ್ಯಾಟ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಭೂಚೇತನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳೆಗಳ ಆರಂಭ ದಿಂದ ಹಿಡಿದು ಬೆಳೆ ಕಟಾವಿನವರೆಗೆ ಬೇರೆ ಬೇರೆ ಕೃಷಿ ತಜ್ಞರ ಮಾರ್ಗದರ್ಶನ ಪಡೆಯುವುದರಿಂದ ರೈತರಿಗೆ ಅನುಕೂಲಗಳಾಗಲಿದೆ ಎಂದು ಹೇಳಿದರು.

ಇಕ್ರಿಸ್ಯಾಟ್ ವಿಜ್ಞಾನಿ ಶಿವಕುಮಾರ ಮಾತನಾಡಿ, ರೈತರು ಕೃಷಿ ಕ್ಷೇತ್ರದಲ್ಲಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿ ಸಿಕೊಳ್ಳುವುದರಿಂದ ಉತ್ತಮ ಫಸಲು ಪಡೆದು ಆರ್ಥಿಕವಾಗಿ ಸಬಲರಾಗಬಹುದು.

ADVERTISEMENT

ರೈತರು ಬಿತ್ತುವಾಗ ಸರಿಯಾದ ತಳಿ ಆಯ್ಕೆಮಾಡಿ ಬೀಜೋಪಚಾರವನ್ನು ಮಾಡಿ ಕೀಟಗಳ ಹಾಗೂ ರೋಗಗಳ ಸಂದಿಗ್ಧ ಪರಿಸ್ಥಿತಿಗೆ ಅನುಗುಣವಾಗಿ ಸಸ್ಯಜನ್ಯ ಹಾಗೂ ರಾಸಾಯನಿಕ ಕ್ರೀಮಿನಾಶಕಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಿಂಪರಣೆ ಮಾಡಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದರು.

ಸಹಾಯಕ ಕೃಷಿ ಅಧಿಕಾರಿ ಎ.ಆರ್.ನಾಯಿಕ, ತಾಂತ್ರಿಕ ಸಂಶೋಧಕ ತುಕಾರಾಮ ವೇಣು ನಾಯಿಕ, ರೈತ ಸಂಪರ್ಕ ಕೃಷಿ ಅಧಿಕಾರಿ ಡಿ.ಎಸ್.ಅವಜಿ ಇದ್ದರು. ರೈತ ಅನುವುಗಾರರಾದ ರಾಮು ಕಾರಭಾರಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.